Advertisement

ಅವಿಶ್ವಾಸ  ಮಂಡನೆಗೆ ಕಾಂಗ್ರೆಸ್‌ ಸಜ್ಜು

07:30 AM Mar 24, 2018 | |

ನವದೆಹಲಿ: ಇದೀಗ, ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್‌ ನಿರ್ಧರಿಸಿದೆ. 
ಮಂಗಳವಾರ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೊತ್ತುವಳಿ ಮಂಡಿಸಲಿದ್ದು, ಈ ವೇಳೆ ಎಲ್ಲರೂ ಹಾಜರಿರುವಂತೆ  ತನ್ನ ಸಂಸದರಿಗೆ ಕಾಂಗ್ರೆಸ್‌ ವಿಪ್‌ ಜಾರಿಗೊಳಿಸಿದೆ.  ಇತ್ತೀಚೆಗೆ, ಟಿಡಿಪಿ, ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷಗಳೂ  ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಗದ್ದಲದಿಂದಾಗಿ ಚರ್ಚೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಏತನ್ಮಧ್ಯೆ, ಪ್ರತಿಪಕ್ಷಗಳ ಗದ್ದಲದ  ಕಾರಣ, ಸತತ 15ನೇ ದಿನವೂ  ಸದನಗಳ ಕಲಾಪ ಕೊಚ್ಚಿಹೋಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next