Advertisement

ಕಾಂಗ್ರೆಸ್‌ ಮಹಿಳೆಯರ ಪರ: ಪುಷ್ಪಾ ಅಮರನಾಥ

08:37 AM Apr 02, 2019 | Sriram |

ಹುಬ್ಬಳ್ಳಿ: ಕಾಂಗ್ರೆಸ್‌ ಮಹಿಳಾ ಪರವಾಗಿದ್ದು, ಈಗಾಗಲೇ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಓರ್ವ ಮಹಿಳೆಗೆ ಟಿಕೆಟ್‌ ನೀಡಿದೆ. ರಾಜ್ಯದಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಐದು ವರ್ಷಗಳ ಕಾಲ ಸುಳ್ಳಿನ ಆಡಳಿತ ನೀಡಿದ ಬಿಜೆಪಿಯನ್ನು ದೇಶದ ಜನ ನೋಡಿದ್ದು, ಬಡವರ ಪರ ಅನೇಕ ಯೋಜನೆಗಳ ಚಿಂತನೆ ಹೊಂದಿದ ರಾಹುಲ್‌ ಗಾಂಧಿ ಪ್ರಧಾನಿಯಾಗುತ್ತಾರೆ. ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ಎಲ್ಲವೂ ನಾನೇ ಮಾಡುತ್ತಿದ್ದೇನೆಂದು ಹೇಳುತ್ತಿದ್ದಾರೆ. ನಾವು ಸರ್ಜಿಕಲ್‌ ಸ್ಟ್ರೆ çಕ್‌ ಮಾಡಿದ್ದೇವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವು ಬಡವರ ಪರ ಸ್ಟ್ರೆçಕ್‌ ಮಾಡಲು ಹೊರಟಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next