Advertisement

ಕಾಂಗ್ರೆಸ್‌ ಹೊರಗಿಟ್ಟು ಯುಪಿ ಲೋಕಸಭೆ ಸೀಟು ಹಂಚಿಕೊಂಡ SP, BSP

11:42 AM Dec 19, 2018 | udayavani editorial |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಒಗ್ಗೂಡಿ ಹೋರಾಡುವ ವಿರೋಧ ಪಕ್ಷಗಳ ಯೋಜನೆಗೆ ಇದೀಗ ಭಾರೀ ಹೊಡೆತ ಉಂಟಾಗಿದೆ.

Advertisement

ಲೋಕಸಭೆಗೆ 80 ಸದಸ್ಯರನ್ನು ಆಯ್ಕೆ ಮಾಡಿ ಕಳಿಸುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟು  ಅಖೀಲೇಶ್‌ ಯಾದವ್‌ ಅವರ ಎಸ್‌ಪಿ ಮತ್ತು ಮಾಯಾವತಿ ಷವರ ಬಿಎಸ್‌ಪಿ ಪಕ್ಷ ತಮ್ಮೊಳಗೇ ಸೀಟು ಹಂಚಿಕೊಳ್ಳುವ ಪ್ರಸ್ತಾವವನ್ನು ಅಂತಿಮಗೊಳಿಸಿರುವ ಅಚ್ಚರಿಯ ವಿದ್ಯಮಾನ ಇಂದು ನಡೆದಿದೆ ಎಂದು ಮೂಲಗಳು ತಿಳಿಸಿವೆ. 

ಸೀಟು ಹಂಚಿಕೆಯ ಈ ಡೀಲ್‌ನಲ್ಲಿ  ಎಸ್‌ಪಿ ಮತ್ತು ಬಿಎಸ್‌ಪಿ ಜತೆಗೆ ರಾಷ್ಟ್ರೀಯ ಲೋಕ ದಳ ಕೂಡ ಸೇರಿಕೊಂಡಿದೆ ಎಂದು ತಿಳಿದು ಬಂದಿದೆ. 

ಆರ್‌ಎಲ್‌ಡಿ ಗೆ ಮೂರು ಸೀಟುಗಳನ್ನು ಬಿಟ್ಟುಕೊಡಲಾಗಿದ್ದು ಉಳಿದ ಸೀಟುಗಳನ್ನು ಎಸ್‌ಪಿ ಮತ್ತು ಬಿಎಸ್‌ಪಿ ಸಮಾನವಾಗಿ ಹಂಚಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. 

2019ರ ಜನವರಿ 15ರಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಎಸ್ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ನಡುವಿನ ಸೀಟು ಹಂಚಿಕೆ ಡೀಲನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. 

Advertisement

ಎಸ್‌ಪಿ ಮತ್ತು ಬಿಎಸ್‌ಪಿ ಒಗ್ಗೂಡಿರುವುದು 2019ರ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಗೆ ಅತ್ಯಂತ ಕಠಿನ ಸವಾಲಾಗಿ ಪರಿಣಮಿಸಲಿದೆ ಎಂದು ತಿಳಿಯಲಾಗಿದೆ.

ಕೆಲ ತಿಂಗಳ ಹಿಂದೆ ನಡೆದಿದ್ದ ಉತ್ತರ ಪ್ರದೇಶದ ಗೋರಖ್‌ಪುರ (ಸಿಎಂ ಯೋಗಿ ಆದಿತ್ಯನಾಥ್‌ ಅವರ ಕ್ಷೇತ್ರ) ಮತ್ತು ಫ‌ೂಲ್‌ಪುರ  (ಡಿಸಿಎಂ ಸುಶೀಲ್‌ ಮೋದಿ ಕ್ಷೇತ್ರ) ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯನ್ನು ಎಸ್‌ಪಿ – ಬಿಎಸ್‌ಪಿ ಮೈತ್ರಿಕೂಟ ಜಯಿಸಿತ್ತು ಎನ್ನುವುದು ಗಮನಾರ್ಹ. 

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೊರಗಿಡುವ ಆಲೋಚನೆ ಇದ್ದುದರಿಂದಲ್ಲೇ ಮಾಯಾವತಿ ಮತ್ತು ಅಖೀಲೇಶ್‌ ಯಾದವ್‌ ಅವರು ಮಧ್ಯಪ್ರದೇಶದ ನೂತನ ಕಾಂಗ್ರೆಸ್‌ ಸಿಎಂ ಅಶೋಕ್‌ ಗೆಹ್‌ಲೋಟ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ತಪ್ಪಿಸಿಕೊಂಡಿದ್ದರೆಂಬುದು ಈಗ ಸುಸ್ಪಷ್ಟ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next