Advertisement

ಕಾಂಗ್ರೆಸ್‌ ನವರಿಗೆ ತಮ್ಮ ನಾಯಕ ಯಾರೆಂಬುದೇ ಗೊತ್ತಿಲ್ಲ: ಈಶ್ವರಪ್ಪ

09:40 AM Sep 20, 2019 | Team Udayavani |

ದಾವಣಗೆರೆ:  ಕಾಂಗ್ರೆಸ್ ನವರಿಗೆ ನಮ್ಮ ನಾಯಕರು ಯಾರು ಎಂಬುದು ಗೊತ್ತಿಲ್ಲ.  ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು?  ವಿಧಾನ ಸಭೆ ಪ್ರತಿಪಕ್ಷದ ನಾಯಕ ಯಾರು ಅಂತಲೇ ಗೊತ್ತಿಲ್ಲ. ಕಾಂಗ್ರೆಸ್ ಇದೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಚಿವ ಕೆ ಎಸ್‌ ಈಶ್ವರಪ್ಪ ಹೇಳಿದರು.

Advertisement

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಸಲ ಜಿಲ್ಲೆಗೆ ಭೇಟಿ ನೀಡಿದ ಈಶ್ವರಪ್ಪ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಕೆಜಿಪಿ ಮತ್ತು ಬಿಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆಗಿದ್ದರು.  ತಾನೇ ದೇವರಾಜ ಅರಸು ಎಂಬಂತೆ ಬಿಂಬಿಸಿಕೊಂಡರು. ಅದು ಸುಳ್ಳಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್  ಹುಡುಕಬೇಕಾಗಿದೆ ಎಂದು ಮಾಜಿ ಮುಖ್ಯಂಮತ್ರಿ ಸಿದ್ದರಾಮಯ್ಯನವರನ್ನು ಟೀಕೆ ಮಾಡಿದರು.

ನೇರೆ ಸಂತ್ರಸ್ತರ ವಿಚಾರ ಕಾಂಗ್ರೆಸ್ ಎತ್ತಿಕೊಳ್ಳುವುದು ಕುತಂತ್ರವಾಗಿದೆ ಎಂದ ಕೆ ಎಸ್‌ ಈಶ್ವರಪ್ಪ, ಬೆಳಗಾವಿ ಸುವರ್ಣ ಸೌಧದಲ್ಲಿ ಹತ್ತು ಹನ್ನೇರಡು ಇಲಾಖೆಗಳ ಕಚೇರಿ ಆರಂಭಿಸಲು ಸರ್ಕಾರ ನಿರ್ಧರಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next