Advertisement

ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ: ಶ್ರೀರಾಮುಲು

06:20 AM Feb 27, 2018 | Team Udayavani |

ಕೊಪ್ಪಳ: ತಿಪ್ಪರಲಾಗ ಹಾಕಿದರೂ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ ಎಂದು ಸಂಸದ ಶ್ರೀರಾಮುಲು ಭವಿಷ್ಯ ನುಡಿದರು.

Advertisement

ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಉಜ್ವಲ ರಥಯಾತ್ರೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹುಲಿಗೆಮ್ಮ ದೇವಿ ಸನ್ನಿ ಧಿಯಲ್ಲಿ ಈ ಮಾತನಾಡುತ್ತಿದ್ದೇನೆ. ಕಾಂಗ್ರೆಸ್‌ 60, ಜೆಡಿಎಸ್‌ 20 ಸ್ಥಾನ ಪಡೆಯಲಿದ್ದು, ಬಿಜೆಪಿ ಮತ್ತೆ ಅ ಧಿಕಾರಕ್ಕೆ ಬರಲಿದೆ ಎಂದರು.

ರಾಜ್ಯದಲ್ಲೀಗ ಸಿಎಂ ವರ್ಚಸ್ಸು ಕಡಿಮೆಯಾಗಿದೆ. ಕಾಂಗ್ರೆಸ್‌ ಮುಕ್ತಕ್ಕೆ ಬಿಜೆಪಿ ಸಜ್ಜಾಗಿದ್ದು, 19 ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೇರಿದೆ. ಕರ್ನಾಟಕ 20ನೇ ರಾಜ್ಯವಾಗಲಿದೆ ಎಂದರು.

ಸಂಸದರ ಪೈಕಿ ಬಿಎಸ್‌ವೈಗಷ್ಟೆ ಟಿಕೆಟ್‌ ಪಕ್ಕಾ ಆಗಿದೆ. ರಾಜ್ಯ ರಾಜಕಾರಣದಲ್ಲಿ ಇರುವ ಆಶಯ ನಮ್ಮದೂ ಇದೆ. ಪಕ್ಷ ಸ್ಪ ರ್ಧಿಸು ಎಂದರೆ ಸ್ಪರ್ಧಿಸಲಾಗುವುದು. ಜನಾರ್ದನ ರೆಡ್ಡಿ ಚುನಾವಣೆಗೆ ಸ್ಪರ್ಧಿಸಲ್ಲ. ಅವರ ಪತ್ನಿಯೂ ಸ್ಪರ್ಧಿಸಲ್ಲ. ಆದರೆ ಪಕ್ಷ ಸಂಘಟಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next