Advertisement

Congress; ರಾಹುಲ್‌ ವಿರುದ್ಧ ಅಸ್ಸಾಂನಲ್ಲಿ ಕೇಸು?

12:55 AM Jan 24, 2024 | Vishnudas Patil |

ಗುವಾಹಟಿ: ಸಂಸದ ರಾಹುಲ್‌ ಗಾಂಧಿ ವಿರುದ್ಧ ಕೇಸು ದಾಖಲಿಸುವಂತೆ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಪೊಲೀಸರಿಗೆ ಮಂಗಳವಾರ ಆದೇಶ ನೀಡಿದ್ದಾರೆ. ಭಾರತ್‌ ಜೋಡೋ ನ್ಯಾಯ ಯಾತ್ರೆ ಗುವಾಹಟಿ ಪ್ರವೇಶಿಸದಂತೆ ನಿಷೇಧ ಹೇರಿದ್ದರೂ, ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸರ ಜತೆಗೆ ವಾಗ್ವಾದ ನಡೆಸಿ, ಬ್ಯಾರಿಕೇಡ್‌ಗಳನ್ನು ಕಿತ್ತೆಸೆದಿದ್ದ ಘಟನೆ ನಡೆದಿತ್ತು. ಕಾರ್ಯಕರ್ತರಿಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಯನಾಡ್‌ ಸಂಸದರ ವಿರುದ್ಧ ಕೇಸು ದಾಖಲಿಸಲು ಸಿಎಂ ಆದೇಶ ನೀಡಿದ್ದಾರೆ.

Advertisement

ಈ ಬೆಳವಣಿಗೆ ರಾಹುಲ್‌ ಅವರನ್ನು ಸಿಟ್ಟಿಗೆಬ್ಬಿಸಿದ್ದು, ಇಂಥ ಕ್ರಮಗಳಿಂದ ತಮ್ಮನ್ನು ಪ್ರಚೋದನೆಗೆ ಒಳಪಡಿಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರೇ ಅಸ್ಸಾಂ ಸಿಎಂ ಕಚೇರಿ ಮೂಲಕ ಯಾತ್ರೆಯನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದಿರಬಹುದು. ಆದರೆ, ಕಾನೂನು ಉಲ್ಲಂ ಸಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಜ.25ರ ವರೆಗೆ ಅಸ್ಸಾಂನಲ್ಲಿ ಯಾತ್ರೆ ಮುಂದುವರಿಯವಲಿದೆ.

Advertisement

Udayavani is now on Telegram. Click here to join our channel and stay updated with the latest news.

Next