Advertisement

ಪೊಲೀಸ್‌ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಕೆ

05:30 AM Jul 04, 2020 | Lakshmi GovindaRaj |

ಪಾಂಡವಪುರ: ಪಟ್ಟಣದ ಪೊಲೀಸ್‌ ಠಾಣೆಯ ನೂತನ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಪ್ರಭಾಕರ್‌, ಸಬ್‌ ಇನ್ಸ್‌ಪೆಕ್ಟರ್‌ ದಾಸಪ್ಪ ಅವರಿಗೆ ಸಮಾಜ ಸೇವಕ ಬಿ.ರೇವಣ್ಣ ಅಭಿಮಾನಿ ಬಳಗದಿಂದ ಅಭಿನಂದನೆ ಸಲ್ಲಿಸಲಾಯಿತು. ಪಟ್ಟಣದ  ಪೊಲೀಸ್‌ ಠಾಣೆಗೆ ತೆರೆಳಿದ ಬಿ.ರೇವಣ್ಣ ಅಭಿಮಾನಿ ಬಳಗದ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಪ್ರಭಾಕರ್‌, ಸಬ್‌ ಇನ್ಸ್‌ಪೆಕ್ಟರ್‌ ದಾಸಪ್ಪ ಅವರಿಗೆ ಹೂ ಮಾಲೆ ಹಾಕಿ, ಅಭಿನಂದಿಸಿದರು.

Advertisement

ಬಿ.ರೇವಣ್ಣ  ಅಭಿಮಾನಿ ಬಳಗದ ಮುಖಂಡ ಬಿ.ಟಿ.ಮಂಜುನಾಥ್‌ ಮಾತನಾಡಿ, ತಾಲೂಕಿನ ಆರಕ್ಷಕ ಠಾಣೆಯ ನೂತನ ಅಧಿಕಾರಿಗಳಿಗೆ ಬಿ.ರೇವಣ್ಣ ಅಭಿಮಾನಿ ಬಳಗದಿಂದ ಅಭಿನಂದನೆ ಸಲ್ಲಿಸಲಾಗಿದೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಪ್ರಭಾಕರ್‌, ಸಬ್‌  ಇನ್ಸ್‌ಪೆಕ್ಟರ್‌ ದಾಸಪ್ಪ ಅವರು ದಕ್ಷ ಹಾಗೂ ಪ್ರಾಮಾಣಿಕಯಿಂದ ಜನರ ಸೇವೆ ಮಾಡಬೇಕು.

ಕೋವಿಡ್‌ 19 ವೇಳೆ ಜಾಗೃತರಾಗಿ ಜನರನ್ನು ರಕ್ಷಣೆ ಮಾಡಬೇಕು. ಠಾಣೆಗೆ ಬರುವ ರೈತರು, ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಬಿ.ರೇವಣ್ಣ ಅಭಿಮಾನಿ ಬಳಗದ  ಮಹದೇಶ್ವರಪುರ ಮಹದೇವು, ಅನುವಿನಹಳ್ಳಿ ವಿಜಿ, ಲಕ್ಷ್ಮೀಸಾಗರ ಜಗದೀಶ್‌, ಶ್ರೀಕಂಠು, ಟಿ.ಎಸ್‌.ಛತ್ರ ವಿಜಿ, ಹರವು ಕಾರ್ತಿಕ್‌, ಭರತ್‌ ಕಿಚ್ಚ, ರಾಗಿಮುದ್ದನಹಳ್ಳಿ ಜಗದೀಶ್‌, ಚಿನಕುರಳಿ  ಸಂಜು, ರಾಕಿ, ಸುರೇಶ್‌, ಶಿಂಢಭೋಗನಹಳ್ಳಿ ಸತೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next