Advertisement

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

09:33 PM Jan 16, 2022 | Team Udayavani |

ಉಡುಪಿ: ಸಂಸ್ಕೃತವು ಜಗತ್ತಿನಲ್ಲೇ ಅತ್ಯಂತ ಅಪೂರ್ವವಾದ ಭಾಷೆ. ಧಾರ್ಮಿಕವಾದ ಎಲ್ಲ ಕಾರ್ಯ- ವ್ಯವಹಾರ ಸಂಸ್ಕೃತದಲ್ಲೇ ನಡೆಯಬೇಕಿದೆ. ಯಾಕೆಂದರೆ ಸಂಸ್ಕೃತವೊಂದೇ ನಿತ್ಯವಾದ ಭಾಷೆ. ಉಳಿದೆಲ್ಲ ಭಾಷೆಗಳಿಗೂ ಹುಟ್ಟುನಾಶಗಳಿವೆ. ಆದ್ದರಿಂದಲೇ ಸಂಸ್ಕೃತವೊಂದೇ ದೇವಭಾಷೆ ಎಂದು ಕರೆಯಲ್ಪಟ್ಟಿದೆ.

Advertisement

ಸಂಸ್ಕೃತವನ್ನು ಕಲಿಸುವ ಹೆಮ್ಮೆಯ ಸಂಸ್ಥೆಯಿಂದ ಅಭಿನಂದನೆ ಸ್ವೀಕರಿಸುವುದು ಸಂತೋಷಕರ
ವಾಗಿದೆ ಎಂದು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ಸಂಸ್ಕೃತ ಕಾಲೇಜಿಗೆ ಪರ್ಯಾಯ ಪೂರ್ವಭಾವಿ ಭೇಟಿಯನ್ನಿತ್ತು ಅವರು ಆಶೀರ್ವಚಿಸಿದರು.
ಪ್ರಾಂಶುಪಾಲ ಪ್ರೊ| ಹರಿದಾಸ ಭಟ್‌ ಸ್ವಾಗತಿಸಿ ಎಸ್‌.ಎಂ.ಎಸ್‌.ಪಿ. ಸಭೆ ಕಾರ್ಯದರ್ಶಿ ದೇವಾನಂದ ಉಪಾ
ಧ್ಯಾಯ, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಅಭಿನಂದನ ಫ‌ಲಕ ಅರ್ಪಿಸಿದರು.

ಡಾ| ಷಣ್ಮುಖ ಹೆಬ್ಟಾರ್‌ ಅಭಿನಂದನ ಫ‌ಲಕ ವಾಚಿಸಿದರು. ಡಾ| ಅಮೃತೇಶಾಚಾರ್ಯ ವಂದಿಸಿದರು. ವಿದ್ವಾನ್‌ ಅಜಿತ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next