Advertisement

ದಿಲ್ಲಿ ರಸ್ತೆ ಸಾಮರ್ಥ್ಯಕ್ಕೆ ತಕ್ಕ ವಾಹನ ಪ್ರಮಾಣ: ಅಧ್ಯಯನಕ್ಕೆ ಆದೇಶ

04:01 PM Oct 26, 2018 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ  ದಿನೇ ದಿನೇ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಮೋಟಾರು ವಾಹನಗಳು ಉಗುಳುವ ಹೊಗೆಯು ಒಂದು ಮುಖ್ಯ ಕಾರಣವಾಗಿದೆ. 

Advertisement

ಇದನ್ನು ಗಮನಿಸಿರುವ ರಾಷ್ಟೀಯ ಹಸಿರು ನ್ಯಾಯ ಮಂಡಳಿಯು (NGT), ಸಾರಿಗೆ ಸಚಿವಾಲಯಕ್ಕೆ, ರಾಷ್ಟ್ರ ರಾಜಧಾನಿಯ ರಸ್ತೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಎಷ್ಟು ಸಂಖ್ಯೆಯ ಮೋಟಾರು ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಹುದು ಎನ್ನುವ ಬಗ್ಗೆ ಅಧ್ಯಯನ ನಡೆಸುವಂತೆ ಆದೇಶಿಸಿದೆ. 

ಎನ್‌ಜಿಟಿ ಅಧ್ಯಕ್ಷ ಜಸ್ಟಿಸ್‌ ಆದರ್ಶ್‌ ಕುಮಾರ್‌ ಗೋಯಲ್‌ ಅವರು “ದಿಲ್ಲಿಯೂ ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಅಕ್ರಮ ಪಾರ್ಕಿಂಗ್‌ ಪಿಡುಗು ಮತ್ತು ಅತಿಕ್ರಮಣ ಒಂದು ಗಂಭೀರ ಸಮಸ್ಯೆಯಾಗಿದೆ” ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next