Advertisement

ಶಾಸಕರಿಗೆ ವೇತನ ಪರಿಸ್ಕರಣೆ ಖಂಡನೀಯ: ಗಂಭೀರವಾಗಿ ಪರಿಗಣಿಸಲು ರಾಜ್ಯಪಾಲರಿಗೆ ಒತ್ತಾಯ

02:39 PM Feb 25, 2022 | Team Udayavani |

ಕುರುಗೋಡು: ರಾಜ್ಯದ ಮುಖ್ಯಮಂತ್ರಿಯವರಿಗೆ ಹಾಗೂ ಸಚಿವರಿಗೆ, ಶಾಸಕರಿಗೆ ವಿಧಾನಸಭಾ ಕಲಾಪದಲ್ಲಿ ರಾಜ್ಯದ ಜನತೆ ಮುಂದೆ ಸಭೆಯಲ್ಲಿ ಮಂಡನೆ ಮಾಡದೆ, ಇದ್ದಕ್ಕೆ ಹಾಗೆ ತಿಂಗಳ ವೇತನ ಪರಿಸ್ಕರಣೆ ಮಾಡಿರುವುದು ಸರಿಯಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಮ್ಮಿಗನೂರು ಗ್ರಾಮದ ಕರ್ನಾಟಕ ಪದವೀಧರ ರಾಜ್ಯ ಸಂಚಾಲಕ ಎಸ್. ರಾಮು ರಾಜ್ಯಪಾಲರಿಗೆ ಒತ್ತಾಯ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲ ರೈತರು ಸಾಗುವಳಿ ಮಾಡಿ, ಇನ್ನೂ ಕೆಲ ರೈತರು ಸ್ವಂತ ಜಮೀನುನಲ್ಲಿ ಹಗಲು ಇರಳು ಎನ್ನದೆ ವರ್ಷ ಪೂರ್ತಿ ಭತ್ತ ಬೆಳೆಯುತ್ತಾರೆ. ಅವರಿಗೆ ಸೂಕ್ತ ಬೆಂಬಲ ಬೆಲೆ ನೀಡಲು ಮುಂದಾಗುವುದಿಲ್ಲ. ಇನ್ನೂ ರಾಜ್ಯದ ಮೂಲೆ ಮೂಲೆಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಸಣ್ಣ ಪುಟ್ಟ ಸರಕಾರಿ ನೌಕರಿ ಕೆಲಸದಲ್ಲಿ ತೊಡಗಿ ಅತಿ ಕಡಿಮೆ ಸಂಬಳ ಪಡೆಯುವ ಯುವಕರಿಗೆ ವೇತನ ಹೆಚ್ಚಳ ಮಾಡಲು ಸರಕಾರದಲ್ಲಿ ಹಣವಿಲ್ಲ ಎಂದು ಇಲ್ಲ ಸಲ್ಲದ ಕಾರಣಗಳು ಹೇಳಿ ಜರುಗುತ್ತಾರೆ. ಇದಲ್ಲದೆ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸರಕಾರ ಹಣವಿಲ್ಲ ಎಂದು ಸೊಂಕಿತರಿಗೆ ಬೆಡ್ ವ್ಯವಸ್ಥೆ, ಐಶೂಲೇಷನ್, ವೆಂಟಿಲೆಟರ್ ಗಳು ವ್ಯವಸ್ಥೆ ಮಾಡದೆ ರಾಜ್ಯದಲ್ಲಿ ಸಾವಿರಾರು ಕೋವಿಡ್ ಸೊಂಕಿತರು ಮೃತಪಟ್ಟಿದ್ದಾರೆ. ಇವೆಲ್ಲದಕ್ಕೂ ಹಣ ಬಳಕೆ ಮಾಡದೆ ಮಂತ್ಇ ಸಚಿವರುಗಳಿಗೆ ವೇತನ ಹೆಚ್ಚಳ ಮಾಡಿಕೊಂಡಿರುವುದು ರಾಜ್ಯದ ಪ್ರತಿನಿಧಿಗಳಿಗೆ ಶೋಭೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳಿಗೆ ಸ್ಕಾಲಾರ್ ಶಿಪ್ ಹೆಚ್ಚಳ ಮಾಡುವ ವಿಷಯವಿಲ್ಲ ಮತ್ತು ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವ ವಿಷಯ ಇಲ್ಲ. ಅದರಲ್ಲೂ ತಿಂಗಳ ಪೂರ್ತಿ ಕ್ಲಾಸ್ ಬಿಟ್ಟು ರಸ್ತೆಗೆ ಇಳಿದು ಹೋರಾಟ ಮಾಡಿದ ನಂತರ ವೇತನ ಹೆಚ್ಚಳ ಮಾಡಿದ್ದಾರೆ ಅದು ಶರತ್ತು ಬದ್ದ ಅನ್ವಯದ ಮೇಲೆ. ಇದು ರಾಜ್ಯದ ಜನತೆ ಮತ್ತು ಪ್ರಜ್ಞಾವಂತರನ್ನು ದಾರಿ ತಪ್ಪಿಸುವ ಕೆಲಸ ಮೊದಲು ಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ಅನುಮೋದನೆ ಮಾಡಲು ಒಂದರಿಂದ ಇನ್ನೊಂದು ಕಲಾಪಕ್ಕೆ ಶಿಫಾರಸ್ಸು ಮಾಡಿ ಹಲವಾರು ಚರ್ಚೆ ಕೈಗೊಳ್ಳುತ್ತಾರೆ. ಆದರೆ ಇವರು ತಮ್ಮ ವೇತನ ಪರಿಸ್ಕರಣೆ ಮಾಡಿಕೊಳ್ಳಲು ಯಾವ ಸಭೆಯಲ್ಲಿ ಮಂಡನೆ ಮಾಡಿ ರಾಜ್ಯದ ಜನತೆಗೆ ತಿಳಿಸಿದ್ದಾರೆ ಹೇಳಲಿ ನೋಡೋಣ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next