Advertisement

ಕಾಂತಮಂಗಲ ಸೇತುವೆಗೆ ಕಾಂಕ್ರೀಟ್‌ ತೇಪೆ 

12:08 PM Sep 27, 2018 | |

ಅಜ್ಜಾವರ: ಸುಳ್ಯ- ಮಂಡೆಕೋಲು ಸಂಪರ್ಕ ರಸ್ತೆಯಾದ ಕಾಂತಮಂಗಲ ಸೇತುವೆ ದುರಸ್ತಿ ಕಾರ್ಯ ಅತೀ ವೇಗದಲ್ಲಿ ನಡೆಯುತ್ತಿದೆ. ಸೇತುವೆಯ ಮೇಲ್ಪದರವನ್ನು ಅಗೆದು ಕಾಂಕ್ರೀಟು ಹಾಕಲಾಗುತ್ತಿದೆ. ಸೆ. 7ರಿಂದ ಆರಂಭವಾದ ದುರಸ್ತಿ ಕಾಮಗಾರಿ ಕಾಂಕ್ರೀಟು ತೇಪೆ ಹಚ್ಚುವುದರೊಂದಿಗೆ ಒಂದು ಹಂತ ಕೊನೆಗೊಂಡಿದೆ. ಸ್ಥಳೀಯರು ಕಾರ್ಮಿಕರ ಜತೆಗೂಡಿ ಸಲಹೆ – ಸೂಚನೆಗಳನ್ನು ನೀಡುತ್ತಿದ್ದಾರೆ. ಸೇತುವೆಯ ಕ್ಯೂರಿಂಗ್‌ ಇರುವುದರಿಂದ 20ರಿಂದ 25 ದಿನಗಳು ಬೇಕಾಗಬಹುದೆಂದು ಎಂಜಿನಿಯರಿಂಗ್‌ ಇಲಾಖೆ ತಿಳಿಸಿದೆ.

Advertisement

ಸೇತುವೆಯ ಒಂದು ಭಾಗದಲ್ಲಿ ಜಲ್ಲಿಕ ಲ್ಲುಗಳ ದೊಡ್ಡ ರಾಶಿಗಳು ಹಾಕಿರುವುದರಿಂದ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಕಾಂಕ್ರೀಟು ತೇಪೆ ಹಾಕುತ್ತಿರುವ ಕಾರಣ ಅದು ಒಣಗುವ ಮೊದಲೇ ಅದರ ಮೇಲೆ ಓಡಾಡಿದರೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಎಂಜಿನಿಯರಿಂಗ್‌ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ  ಇದ್ದು ಪರಿಶೀಲಿಸುತ್ತಿದ್ದಾರೆ. ಜನರ ಮುಕ್ತ ಓಡಾಟಕ್ಕೆ ಸೇತುವೆ ತೆರೆಯಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next