Advertisement

ಸೇತುವೆ ಮೇಲಿನ ಕಸಕಡ್ಡಿ ಸರಿಸಿ ನೀರಿಗೆ ದಾರಿ ಮಾಡಿದ ವಿದ್ಯಾರ್ಥಿನಿಯರು!

10:56 PM Jun 08, 2024 | Team Udayavani |

ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಶನಿವಾರ ರಾತ್ರಿ ವರೆಗೂ ಧಾರಾಕಾರ ಮಳೆಯಾಗಿದ್ದು ಹಲವೆಡೆ ಚರಂಡಿ ಸಮಸ್ಯೆಯಿಂದ ಜನತೆ ಸಮಸ್ಯೆ ಅನುಭವಿಸಿದರು.

Advertisement

ಸುಳ್ಯದ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಸಂರ್ಪಕಿಸುವ ರಸ್ತೆಯ ಸೇತುವೆಯಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನ ಸವಾರರು, ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದರು. ಸಮರ್ಪಕ ನಿರ್ವಹಣೆಯಿಲ್ಲದಿರುವುದೇ ಸಮಸ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಬಳಿಕ ಸರಕಾರಿ ಕಾಲೇಜಿನ 3-4 ವಿದ್ಯಾರ್ಥಿನಿಯರು ಸೇತುವೆಯಿಂದ ನೀರು ಹೊರಕ್ಕೆ ಸರಾಗವಾಗಿ ಹರಿವಿಗೆ ಅಡ್ಡಿಯಾಗಿದ್ದ ಮಣ್ಣು, ಕಸ ತೆರವು ಮಾಡಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡಿದರು. ವಿದ್ಯಾರ್ಥಿನಿಯರ ಕೆಲಸದ ವೀಡಿಯೋ ಇದೀಗ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next