Advertisement

ಕಾಸರಗೋಡಿನಲ್ಲಿ 3ನೇ ಹಂತದ ಕೋವಿಡ್‌ ನಿಯಂತ್ರಣಕ್ಕೆ ವಿಸ್ತೃತ ಯೋಜನೆ: ಜಿಲ್ಲಾಧಿಕಾರಿ

12:40 AM May 15, 2020 | Sriram |

ಕಾಸರಗೋಡು: ಜಿಲ್ಲೆಯಲ್ಲಿ 3ನೇ ಹಂತದ ಕೋವಿಡ್‌ ನಿಯಂತ್ರಣಕ್ಕೆ ವಿಸ್ತೃತ ಯೋಜನೆ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್‌ ನಿಯಂತ್ರಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇತರ ರಾಜ್ಯಗಳಿಂದ ತಲಪಾಡಿ ಚೆಕ್‌ಪೋಸ್ಟ್‌ ಮೂಲಕ ಆಗಮಿಸುವವರಿಗೆ ಪಾಸ್‌ ಕಡ್ಡಾಯವಾಗಿದೆ. ಪಾಸ್‌ ಮಂಜೂ ರಾತಿಯಲ್ಲಿ ಗರ್ಭಿಣಿಯರು, ಮಕ್ಕಳು, ರೋಗಿಗಳು, ವಯೋವೃದ್ಧರು, ಮಹಿಳೆ ಯರಿಗೆ ಆದ್ಯತೆ ನೀಡಲಾಗುವುದು. ಪಾಸ್‌ ಮಂಜೂರಾತಿಯಲ್ಲಿ ಆದ್ಯತೆ ಕ್ರಮ ಖಚಿತಗೊಳಿಸುವ ಹೊಣೆಯನ್ನು ಹೆಚ್ಚುವರಿ ದಂಡನಾಧಿಕಾರಿ, ಉಪ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಪಾಸ್‌ ಇಲ್ಲದೆ ಜನರನ್ನು ಅಕ್ರಮ ವಾಗಿ ಗಡಿ ದಾಟಿಸುವವರನ್ನು ಸರಕಾರಿ ಕ್ವಾರಂಟೈನ್‌ಗೆ ದಾಖಲಿಸಲಾಗುವುದು. ಜತೆಗೆ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಲಪಾಡಿ ಮೂಲಕ ಕೇರಳ ಪ್ರವೇಶ ಮಾಡುವವರು ರಾ.ಹೆ.ಮೂಲಕವೇ ತಮ್ಮೂರಿಗೆ ತಲಪಬೇಕು. ತಮ್ಮ ಪ್ರಯಾಣಕ್ಕಾಗಿ ಅಡ್ಡದಾರಿ, ಎಸ್‌.ಪಿ.ಟಿ. ರಸ್ತೆ ಬಳಸಬಾರದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಎಸ್‌. ಸಾಬು, ಉಪ ಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌, ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌, ವಲಯ ಕಂದಾಯಾಅಧಿಕಾರಿ ಅಹಮ್ಮದ್‌ ಕಬೀರ್‌, ಜಿಲ್ಲಾ ಸರ್ವೆಲೆನ್ಸ್‌ ಅಧಿಕಾರಿ ಡಾ| ಎ.ಟಿ. ಮನೋಜ್‌, ಎನ್‌.ಎಚ್‌.ಎಂ. ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ| ರಾಮನ್‌ ಸ್ವಾತಿ ವಾಮನ್‌, ಪಂ. ಸಹಾಯಕ ನಿರ್ದೇಶಕ ರೆಜಿ ಕುಮಾರ್‌ ಮೊದಲಾದವರಿದ್ದರು.

6,535 ಮಂದಿ ಕೇರಳ ಪ್ರವೇಶ
ತಲಪಾಡಿಯ ಮಂಜೇಶ್ವರ ಚೆಕ್‌ಪೋಸ್ಟ್‌ ಮೂಲಕ ಈ ವರೆಗೆ 6,535 ಮಂದಿ ಕೇರಳ ಪ್ರವೇಶಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ 17,859 ಮಂದಿಗೆ ಪಾಸ್‌ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿ ದರು. ಕಾಸರಗೋಡು ಜಿಲ್ಲೆಯ 1,753 ಮಂದಿ ಈ ವರೆಗೆ ಊರಿಗೆ ಮರಳಿದ್ದಾರೆ. 3,905 ಮಂದಿಗೆ ಪ್ರವೇಶಾತಿ ಪಾಸ್‌ ಮಂಜೂರು ಮಾಡಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next