Advertisement

‘ಬಾಕಿ ಇರುವ ರೈಲ್ವೇ ಕಾಮಗಾರಿ ಮುಗಿಸಿ’

12:02 PM Nov 10, 2017 | Team Udayavani |

ಮಹಾನಗರ: ಬಾಕಿ ಇರುವ ರೈಲ್ವೇ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಶಾಸಕ ಜೆ.ಆರ್‌. ಲೋಬೋ ಅವರು ಅಧಿಕಾರಿಗಳಿಗೆ ತಿಳಿಸಿದರು. ಮಲ್ಲಿಕಟ್ಟೆಯಲ್ಲಿರುವ ತನ್ನ ಕಚೇರಿಯಲ್ಲಿ ರೈಲ್ವೇ ಮತ್ತು ಮಹಾನಗರಪಾಲಿಕೆ ಅಧಿಕಾರಿಗಳ ಜತೆ ಚರ್ಚಿಸಿದರು.

Advertisement

ಕನಕರಬೆಟ್ಟು- ಸೂಟರಪೇಟೆ ಅಂಡರ್‌ ಪಾಸ್‌ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಅವರು, ಈ ಕಾಮಗಾರಿಯನ್ನು ಮುಗಿಸುವ ಬಗ್ಗೆ ಮತ್ತು 3 ಮೀಟರ್‌ ಅಗಲದ ಕಾಂಕ್ರೀಟ್‌ ರಸ್ತೆ ಮಾಡಲು ಸೂಚಿಸಿದರು.

ಕೆಎಂಸಿ ಬಳಿ ಒಳಚರಂಡಿ ನಿರ್ಮಿಸುವ ಬಗ್ಗೆ ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಅಲ್ಲಿ ಸಮಸ್ಯೆಯಾಗುತ್ತಿರುವುದನ್ನು ಅಧಿಕಾರಿಗಳಿಗೆ ವಿವರಿಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.

ಹಲವು ಕಾಮಗಾರಿಗಳ ಮಾಹಿತಿ ಸಂಗ್ರಹಣೆ
ಸರಿಪಳ್ಳ-ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿ, ಮಹಾಕಾಳಿಪಡ್ಪು ರೈಲ್ವೇ ಅಂಡರ್‌ ಪಾಸ್‌ ರಸ್ತೆ, ಅತ್ತಾವರ ವೈದ್ಯನಾಥ ನಗರ ರೈಲ್ವೇ
ಕ್ರಾಸಿಂಗ್‌ ಬಗ್ಗೆಯೂ ಶಾಸಕರು ಮಾಹಿತಿ ಪಡೆದು ಈ ಕಾಮಗಾರಿಗಳ ಬಗ್ಗೆ ಸೂಕ್ತ ಸಲಹೆ ನೀಡಿದರು. ಪಾಲಿಕೆ ಕಮಿಷನರ್‌ ನಜೀರ್‌, ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್‌.ಲಿಂಗೇಗೌಡ, ಕಾರ್ಪೊರೇಟರ್‌ಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next