Advertisement

ಮಳೆಗಾಗಿ ದೇವರ ಮೊರೆ ಹೋದ್ರು

12:36 PM Aug 02, 2018 | Team Udayavani |

ಹರಪನಹಳ್ಳಿ: ಬೆಳೆ ಬಾಡುತ್ತಿರುವ ಹಿನ್ನೆಲೆಯಲ್ಲಿ ವರುಣನ ಆಗಮನಕ್ಕಾಗಿ ಪ್ರಾರ್ಥಿಸಿ ತಾಲೂಕಿನ ಉದ್ದಗಟ್ಟಿ ದೊಡ್ಡ ತಾಂಡಾ (ಬಾಪೂಜಿ ನಗರ) ಗ್ರಾಮಸ್ಥರು ಹುಲಿಕಟ್ಟಿ ಸಮೀಪದ ಶಕ್ತಿದೇವತೆ ಗುಳೇದ ಲಕ್ಕಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ವಿಶೇಷ ಅಲಂಕಾರ ಮಾಡಿ ನೈವೇದ್ಯ, ಫಲಪುಷ್ಟಗಳನ್ನು ಸಲ್ಲಿಸಿದ ನಂತರ ಗ್ರಾಮಸ್ಥರೆಲ್ಲರೂ ಸಾಮೂಹಿಕವಾಗಿ ಪ್ರಾರ್ಥಿಸಿ, ನಂತರ ಪ್ರಸಾದ ಸ್ವೀಕರಿಸಿದರು. ಬಾಪೂಜಿ ನಗರದಲ್ಲಿರುವ ಆಂಜನೇಯಸ್ವಾಮಿ, ಸುಕಲಮ್ಮ, ಮರಿಯಮ್ಮದೇವಿಗೂ ಕೂಡ ಪೂಜೆ ಸಲ್ಲಿಸಲಾಯಿತು. ಗ್ರಾಮದ ಮುಖಂಡರಾದ ವೇದುನಾಯ್ಕ, ಡಾಕ್ಯನಾಯ್ಕ, ಹನುಮಂತನಾಯ್ಕ, ಪಿ.ಲಕ್ಷ್ಮಣನಾಯ್ಕ, ನಾಗೇಂದ್ರನಾಯ್ಕ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next