Advertisement

Umapathy Gowda: ನಿರ್ಮಾಪಕ ಉಮಾಪತಿ ಗೌಡರಿಂದ ದೂರು

10:21 AM Nov 28, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಹಾಗೂ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ್‌ ಡೆನ್ನಿಸ್‌ ನಡುವೆ ಪೊಲೀಸ್‌ ಇನ್‌ಸ್ಪೆಕ್ಟರ್‌ವೊಬ್ಬರ ವರ್ಗಾವಣೆ ವಿಚಾರವಾಗಿ ನಡೆದಿದೆ ಎಂದು ಹೇಳಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ಕಾನೂನು ಕ್ರಮಕೈಗೊಳ್ಳುವಂತೆ ಉಮಾಪತಿಗೌಡ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಈ ಆಡಿಯೋದಲ್ಲಿರುವ ಧ್ವನಿ ತನ್ನದಲ್ಲ. ಯಾರು ಕಿಡಿಗೇಡಿಗಳು ಮಾರ್ಫಿಂಗ್‌ ಮಾಡಿದ್ದಾರೆ. ಆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಉಮಾಪತಿ ದೂರಿನಲ್ಲಿ ಕೋರಿದ್ದಾರೆ. ತನ್ನ ವಿರುದ್ಧ ತೇಜೋವಧೆಗೆ ಸಂಚು ರೂಪಿಸಿದ ವ್ಯಕ್ತಿಗಳ ವಿರುದ್ಧ ಡಿಸಿಪಿ, ನಗರ ಆಯುಕ್ತರು, ಲೋಕಾ ಯುಕ್ತಕ್ಕೂ ದೂರು ನೀಡುತ್ತೇನೆ. ವಿಜಯ್‌ ಡೆನ್ನಿಸ್‌ ಪರಿಚಯವಿದೆ. ಆದರೆ, ಯಾವ ಇನ್‌ಸ್ಪೆಕ್ಟರ್‌ ವರ್ಗಾವಣೆ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next