Advertisement

ಮುಖ್ಯಮಂತ್ರಿ ಪುತ್ರ ಯತೀಂದ್ರ ವಿರುದ್ಧ ಎಸಿಬಿಗೆ ದೂರು

11:19 AM Oct 18, 2017 | |

ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪಿಗೆ ವ್ಯತಿರಿಕ್ತವಾಗಿ ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಆದೇಶ ಪಡೆದು ಭೂಪಸಂದ್ರ ಬಳಿ 2.26 ಎಕ್ರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿದ್ದ ಬಗ್ಗೆ ಸೋಮವಾರ ಸಿಎಂ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದ ಬಿಜೆಪಿ, ಇದೀಗ ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ಗೆ ಕೇತಮಾರನಹಳ್ಳಿ ಬಳಿಯ ಭೂಮಿ ಬದಲಿಯಾಗಿ ನಿಯಮ ಉಲ್ಲಂ ಸಿ ಹೆಬ್ಟಾಳ ಮೇಲ್ಸೇತುವೆ ಬಳಿ 200 ಕೋ. ರೂ.ನ 2.19 ಎಕ್ರೆ ಭೂಮಿ ಮಂಜೂರು ಮಾಡಿರುವ ಕುರಿತು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ  ವಿರುದ್ಧ ದೂರು ದಾಖಲಿಸಿದೆ.

Advertisement

ಈ ಎರಡೂ ದೂರುಗಳ ಕುರಿತು ಒಂದು ವಾರದಲ್ಲಿ ಎಸಿಬಿ ಎಫ್ಐಆರ್‌ ದಾಖಲಿಸದಿದ್ದಲ್ಲಿ ಪಕ್ಷದ ವತಿಯಿಂದ ಎಸಿಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಎರಡೂ ಪ್ರಕರಣಗಳಲ್ಲಿ ಎಸಿಬಿಯನ್ನೂ ಪ್ರತಿವಾದಿ ಯನ್ನಾಗಿ ಮಾಡಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾ ಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ದಾಖಲೆ  ಬಿಡುಗಡೆ ಮಾಡಲಾಗಿದೆ. ಈ ಕುರಿತು ಎಸಿಬಿ ಯಲ್ಲೂ ದೂರು ದಾಖಲಿಸಲಾಗಿದ್ದು, ಅವರಿಗೂ ಎಲ್ಲ ದಾಖಲೆ ಒದಗಿಸಲಾಗಿದೆ. ಎಸಿಬಿ  ಸಿಎಂ ವಿರುದ್ಧ 

ಎಫ್ಐಆರ್‌ ದಾಖಲಿಸದಿದ್ದಲ್ಲಿ ಅದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next