Advertisement

ಈಗಿರುವ ಕನ್ನಡ ಧ್ವಜಕ್ಕೇ ಮಾನ್ಯತೆ ನೀಡಲು ಸಮಿತಿ

07:15 AM Jul 31, 2017 | Team Udayavani |

ಬೆಂಗಳೂರು: ಈಗಾಗಲೇ ಇರುವ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆಯೇ ಹೊರತು, “ನಾಡಧ್ವಜ’ಕ್ಕಾಗಿ ಸಮಿತಿ ರಚಿಸಿರುವುದರ ಹಿಂದೆ ಯಾವುದೇ ಪ್ರತ್ಯೇಕತೆ ಸ್ಥಾಪಿಸುವ ಉದ್ದೇಶವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

Advertisement

ನಗರದ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾಡಗೀತೆ ಅಧಿಕೃತಗೊಳಿಸಿ ಗೌರವ ನೀಡುತ್ತಿದ್ದೇವೆ.

ಜತೆಗೆ ರಾಷ್ಟಗೀತೆಯನ್ನೂ ಗೌರವಿಸುತ್ತಿದ್ದೇವೆ. ಅದೇ ರೀತಿ, ನಾಡಧ್ವಜ ಬರುವುದರಿಂದ ರಾಷ್ಟ್ರಧ್ವಜದ ಮೇಲಿನ ಗೌರವ ಕಡಿಮೆ ಆಗುವುದಿಲ್ಲ. ಈಗಿರುವ ನಾಡಧ್ವಜಕ್ಕೆ ಮಾನ್ಯತೆ ನೀಡುವುದಷ್ಟೇ ಇದರ ಉದ್ದೇಶವಾಗಿದೆ. ಹಾಗಾಗಿ, ಪ್ರತ್ಯೇಕತೆಯ ಮಾತುಗಳು ಸರಿಯಲ್ಲ ಎಂದು ತೀಕ್ಷ್ಣವಾಗಿ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next