Advertisement

ಗಂಗಾಮತ ಸಮುದಾಯದ ನೆರವಿಗೆ ಬದ್ಧ: ಬಿವೈಆರ್‌

11:29 AM Jan 21, 2019 | |

ಶಿರಾಳಕೊಪ್ಪ: ಗಂಗಾಮತ ಸಮುದಾಯ ಸ್ವಾಭಿಮಾನದಿಂದ ಬಾಳುವುದಕ್ಕೆ ಬೇಕಾದ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಪಟ್ಟಣ ಸಮೀಪದ ಉಡುಗಣಿ ಗ್ರಾಮದಲ್ಲಿ ನಡೆದ ಗಂಗಾಪರಮೇಶ್ವರಿ ದೇವಸ್ಥಾನ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

Advertisement

ಕಳೆದ ಬಾರಿ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಿರಿ. ಆಗ ಶಾಸಕನಾದ ಸಂದರ್ಭದಲ್ಲಿ ಯಡಿಯೂರಪ್ಪನವರ ಆಶೀರ್ವಾದದೊಂದಿಗೆ 25ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇವೆ. ಹಿಂದೆ ಶಾಸಕನಾಗಿದ್ದಾಗ ಸುಮಾರು ದೇವಸ್ಥಾನಗಳಿಗೆ ಅನುದಾನ ಕೊಟ್ಟಿದ್ದೇನೆ. ಈಗ ಕಾನೂನುಗಳಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌, ಆಡಿಟ್ ವರದಿ ಮತ್ತು ಪಂಚಾಯತ್‌ ಹೆಸರಲ್ಲಿ ಜಾಗವಿರಬೇಕು. ಆದಷ್ಟು ಪ್ರಯತ್ನಿಸಿ 2 ಲಕ್ಷ ರೂ.ಗಳನ್ನು ನೀಡುತ್ತೇನೆ. ಎಂಪಿ ಫಂಡ್‌ಗಳಲ್ಲಿ ದೇವಸ್ಥಾನಕ್ಕೆ ಹಣ ಕೊಡಲು ಬರುವುದಿಲ್ಲ. ಕಾನೂನು ಪ್ರಕಾರ ಕೊಡಲು ಸಾಧ್ಯವಾಗದಿದ್ದಲ್ಲಿ ವೈಯಕ್ತಿಕವಾಗಿ ತಾಯಿಯವರ ಹೆಸರಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡುತ್ತೇವೆ ಎಂದು ಹೇಳಿದರು.

ಗ್ರಾಪಂ ನೂತನ ಅಧ್ಯಕ್ಷ ರಾಜಾನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್‌, ತಾಲೂಕು ಬಿಜೆಪಿ ಅಧ್ಯಕ್ಷ ರೇವಣಪ್ಪ, ತಾಪಂ ಅಧ್ಯಕ್ಷ ಕವಲಿ ಸುಬ್ರಮಣ್ಯ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಗಡಿ ಅಶೋಕ್‌, ಚನ್ನವೀರಪ್ಪ, ತಾಪಂ ಸದಸ್ಯ ಪ್ರಕಾಶ್‌, ಶಿಲ್ಪಾ, ಕೆಂಚಪ್ಪ ,ಧರ್ಮಪ್ಪ, ಸಿದ್ದರಾಮಪ್ಪ, ಅಣ್ಣಪ್ಪ, ಗುಡದಯ್ಯ, ಈಶ್ವರ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next