Advertisement

Modi; ಉಕ್ರೇನ್‌, ರಷ್ಯಾ ನಡುವಿನ ಬಿಕ್ಕಟ್ಟು ಪರಿಹರಿಸಲು ಬದ್ಧ: ಪ್ರಧಾನಿ ಮೋದಿ

11:47 PM Sep 24, 2024 | Team Udayavani |

ಹೊಸದಿಲ್ಲಿ: “ಶಾಂತಿ ಸ್ಥಾಪನೆಯ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಉಕ್ರೇನ್‌-ರಷ್ಯಾ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಶಾಂತಿ ಮಾತುಕತೆ ಮಾತ್ರವೇ ಮಾರ್ಗ! ಈ ಬಗ್ಗೆ ಎಲ್ಲ ರೀತಿಯ ಸಹಾಯಕ್ಕೂ ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.

Advertisement

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಬಳಿಕ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಭೇಟಿಯಾದ ಮೋದಿ ಈ ಭರವಸೆ ನೀಡಿದ್ದಾರೆ. ಮೋದಿ ಅವರ 3 ದಿನಗಳ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಭಾರತಕ್ಕೆ ಹಿಂದಿರುಗುವ ಮುನ್ನ ಉಕ್ರೇನ್‌ ಅಧ್ಯಕ್ಷರ ವಿನಂತಿಯ ಮೇರೆಗೆ ಈ ದ್ವಿಪಕ್ಷೀಯ ಸಭೆ ನಡೆಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಹೇಳಿದ್ದಾರೆ

ಸಿಕ್ಖರ ಭೇಟಿ: ಅಮೆರಿಕದಲ್ಲಿರುವ ಸಿಕ್ಖ್ ಸಮುದಾ­ಯದ ಕೆಲವರನ್ನು ಮೋದಿ ಭೇಟಿಯಾ­ಗಿದ್ದು, ಅವರು ಮೋದಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next