Advertisement

ಪೊಲೀಸ್‌ ಆಯುಕ್ತ ಡಾ|ಹರ್ಷ ಟ್ವೀಟ್‌

11:33 PM Oct 28, 2019 | mahesh |

ಮಂಗಳೂರು: ದೀಪಾವಳಿಯ ಶುಭಾಶಯವನ್ನು ತುಳುವಿನಲ್ಲೇ ಟ್ವೀಟ್‌ ಮಾಡುವ ಮೂಲಕ ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಗಮನ ಸೆಳೆದಿದ್ದಾರೆ.

Advertisement

ಪೊಲೀಸ್‌ ಆಯುಕ್ತರಾಗಿ ಡಾ| ಹರ್ಷ ಅಧಿಕಾರ ಸ್ವೀಕರಿಸಿದ ಬಳಿಕ “ಮೈ ಬೀಟ್‌, ಮೈ ಪ್ರೈಡ್‌’ ಕಾರ್ಯಕ್ರಮದ ಮೂಲಕ ನಾಗರಿಕರಿಗೆ ಹೆಚ್ಚು ಹತ್ತಿರವಾಗಿದ್ದರು. ಜನರ ಜತೆ ಬೆರೆತು ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡ ಬೇಕೆಂದು ಸಿಬಂದಿಗೆ ಸಲಹೆ ಮಾಡುತ್ತಿದ್ದರು. ಈಗ ತುಳುವಿನಲ್ಲೇ ದೀಪಾವಳಿ ಸಂದೇಶ ಟ್ವೀಟ್‌ ಮಾಡಿ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಸಂದೇಶ ಇಂತಿದೆ: “ಪ್ರತಿ ವರ್ಷ ಯಾನ್‌ ಎನ್ನ ಪರಿವಾರದೊಟ್ಟುಗು ತುಡರ್‌ ಪರ್ಬೊನು ಆಚರಣೆ ಮಲ್ತೊದಿತ್ತೆ. ಈ ಸರ್ತಿ ಕುಡ್ಲನೇ ಎನ್ನ ಇಲ್ಲ್. ಕುಡ್ಲದಕುಲೇ ಎನ್ನ ಪರಿವಾರ ಎನ್ನೊಂದು ತುಡರ್‌ ಪರ್ಬೊನು ಆಚರಣೆ ಮಲ್ತೊದುಲ್ಲೆ. ಈ ತುಡರ್‌ ಪರ್ಬ ಮಾತೆರ್ನ ಜೀವನೊಡು ಬೊಲ್ಪು ಕನವಡ್‌… ಕುಡ್ಲದ ಮಾತ ಜನಕ್ಲೆಗ್‌ ತುಡರ್‌ ಪರ್ಬದ ಉಡಲ್‌ ದಿಂಜಿನ ಮೋಕೆದ ಎಡ್ಡೆಪ್ಪು’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next