Advertisement

ಶೀಘ್ರವೇ “ಪರಿಷ್ಕೃತ ದಂಡ’ಆದೇಶ: ಲಕ್ಷ್ಮಣ ಸವದಿ

11:06 PM Sep 16, 2019 | Team Udayavani |

ಧಾರವಾಡ: ಹೊಸ ಮೋಟರು ವಾಹನ ಕಾಯ್ದೆಯ ದಂಡದ ಮೊತ್ತ ಕಡಿತಗೊಳಿಸುವ ನಿಟ್ಟಿನಲ್ಲಿ ಗುಜರಾತ್‌ ಸೇರಿ ವಿವಿಧ ರಾಜ್ಯದಲ್ಲಿ ಮಾಡಿರುವ ಆದೇಶಗಳ ಮಾಹಿತಿ ಪಡೆದು ಕಾನೂನು ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ. ಮಂಗಳವಾರ ಸಂಜೆಯೊಳಗೆ ಪರಾಮರ್ಶೆ ಬರಲಿದ್ದು, ಅದನ್ನು ಪರಿಶೀಲಿಸಿ ಆದಷ್ಟು ಬೇಗ ಹೊಸ ಆದೇಶ ಹೊರಡಿಸಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಹೊಸ ಮೋಟರು ವಾಹನ ಕಾಯ್ದೆ ಸಾಮಾನ್ಯರಿಗೂ, ಜನಪ್ರತಿನಿಧಿಗಳಿಗೂ ಒಂದೇ ಆಗಿದೆ. ಸ್ವಯಂ ನಾನೇ ನಿಯಮ ಉಲ್ಲಂಘಿಸಿದರೆ ನನಗೂ ದಂಡ ವಿಧಿಸಲೇಬೇಕು. ಕೇಂದ್ರ ಸಚಿವ ಅಮಿತ್‌ ಶಾ ಜೊತೆ ಮಹಾರಾಷ್ಟ್ರದ ಚುನಾವಣೆ ಕುರಿತು ಮಾತನಾಡಿದ್ದೇನೆ. ಬೇರೆ ಯಾವ ವಿಚಾರವನ್ನೂ ಮಾತನಾಡಿಲ್ಲ. ಅತೃಪ್ತರು ಹಾಗೂ ಉಪಚುನಾವಣೆ ಬಗ್ಗೆ ಅವರೊಂದಿಗೆ ಚರ್ಚಿಸಿಲ್ಲ. ಬಿಎಸ್‌ವೈ ಅವರೇ ನಮ್ಮ ಪ್ರಶ್ನಾತೀತ ನಾಯಕರು. ಅವರ ನೇತೃತ್ವದಲ್ಲಿಯೇ ನಾವೆಲ್ಲ ನಡೆಯುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next