Advertisement

“ಕಾಮಿಡಿ ಕಿಲಾಡಿ’ಫಿನಾಲೆ ಇಂದು

05:05 PM Mar 05, 2017 | |

ಬಾಗಲಕೋಟೆ: ಕನ್ನಡ ಟಿವಿ ಚಾನೆಲ್‌ಗ‌ಳಲ್ಲೇ ಕಾಮಿಡಿ ಕಿಲಾಡಿ ಶೋಗೆ ಇಡೀ ರಾಜ್ಯದ ಜನತೆ ಶ್ರೇಷ್ಠ ಸ್ಥಾನ ನೀಡಿದ್ದು, ಕಳೆದ 17 ವಾರಗಳಿಂದ ನಡೆಯುತ್ತಿದ್ದ ಈ ಸ್ಪರ್ಧೆಯ ಗ್ರ್ಯಾಂಡ್‌ ಫಿನಾಲೆ, ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಮಾ.5ರಂದು ಸಂಜೆ5.30ಕ್ಕೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಡಿಮಿ ಕಿಲಾಡಿಗಳು ಶೋ ನಿರ್ದೇಶಕ ಶರಣಯ್ಯ ಹಿರೇಮಠ (ತಿಮ್ಮಾಪುರ) ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 17 ವಾರಗಳಿಂದ ಅತ್ಯಂತ ಯಶಸ್ವಿಯಾಗಿ ವೀಕ್ಷಕರನ್ನು ರಂಜಿಸಿ, ಹೊಸ ದಾಖಲೆ ಬರೆದಿದೆ.

 ಕನ್ನಡ ಮನರಂಜನಾ ಲೋಕದಲ್ಲಿ ಈಹಿಂದೆ ಹಲವಾರು ರಿಯಾಲಿಟಿ ಶೋಗಳು ನಡೆದಿವೆ. ಶೋನಲ್ಲಿ ಕೆ.ಆರ್‌. ಪೇಟೆ ಶಿವರಾಜ್‌,  ಹುಬ್ಬಳ್ಳಿಯ ನಯನಾ, ದಾವಣಗೆರೆಯ ಗೋವಿಂದೇಗೌಡ, ಲೋಕೇಶ, ಹಿತೇಶ್‌, ಅನೀಶ್‌,ಸಂಜು ಬಸಯ್ಯ, ದಿವ್ಯಾ, ಗೋಕಾಕನ ಪ್ರವೀಣಕುಮಾರ ಮತ್ತು ಮುತ್ತುರಾಜ ಅವರು ಪೈಪೋಟಿ ನಡೆಸಿದ್ದಾರೆ.

ಯಾರು ವಿಜಯಿ ಆಗಲಿದ್ದಾರೆ ಎಂಬುದು ರಾಜ್ಯದ ಜನರ ಎಸ್‌ಎಂಎಸ್‌ ಹಾಗೂ ಮೂವರುನಿರ್ಣಾಯಕರು ಅಂತಿಗೊಳಿಸಲಿದ್ದಾರೆ  ಎಂದರು. ಕಾರ್ಯಕ್ರಮಕ್ಕೆ ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ. ಗಣ್ಯರು, ಅತಿಗಣ್ಯರಿಗೆಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. 

ನಿರ್ಣಾಯಕರಾಗಿ ನವರಸ ನಾಯಕ ಜಗ್ಗೇಶ್‌, ನಟಿ  ರಕ್ಷಿತಾ ಮತ್ತು ನಿರ್ದೇಶಕಯೋಗರಾಜ್‌ ಭಟ್‌ ಇರಲಿದ್ದಾರೆ. ಅವರೊಂದಿಗೆ ನಟ ವಿಜಯ ರಾಘವೇಂದ್ರ ಹಾಗೂ ನಟಿ ಕಾರುಣ್ಯ ರಾಮ್‌ ಆಗಮಿಸಿದ್ದಾರೆ. ಝಿ ಕನ್ನಡದ ಈ ಹಿಂದಿನ ಡ್ರಾಮಾ ಜ್ಯೂನಿಯರ್ ಮಕ್ಕಳು, ಜೋಡಿಹಕ್ಕಿ ಧಾರವಾಹಿ ಕಲಾವಿದರು ವಿಶೇಷ ರಂಜನೆ ನೀಡಲಿದ್ದಾರೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next