Advertisement

ತಾಕತ್ತಿದ್ದರೆ ರಾಜಕೀಯಕ್ಕೆ ಬನ್ನಿ: ವಿಜಯಾನಂದ ಕಾಶಪ್ಪನವರ

02:40 PM Aug 18, 2021 | Team Udayavani |

ಇಳಕಲ್ಲ: ನಾನು ರಾಜಕೀಯಕ್ಕೆ ಬರಲ್ಲ ಎಂದು ಹೇಳುತ್ತ ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿದ್ದೀರಿ. ಈ ನಿಮ್ಮ ಬಯಲಾಟ ಬಹಳ ದಿನ ನಡೆಯಲ್ಲ. ಜನಾ ಇದನ್ನು ನಂಬೋದಿಲ್ಲ. ನಿಮಗೆ ತಾಕತ್ತಿದ್ದರೆ ರಾಜಕೀಯಕ್ಕೆ ಬನ್ನಿ ಎಂದು ಎಸ್‌.ಆರ್‌. ನವಲಿಹಿರೇಮಠ ಅವರಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಟಾಂಗ್‌ ನೀಡಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಮೊದಲು ನಿಮ್ಮ ಎಸ್‌ಆರ್‌ಎನ್‌ಇ ಫೌಂಡೇಶನ್‌ ಮೂಲ ಉದ್ದೇಶ ಏನೆಂದು
ಪ್ರಶ್ನಿಸಿದ ಅವರು, ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ ನನ್ನ ಗೆಲುವಿಗೆ ಅಡ್ಡಗಾಲು ಹಾಕಿದ್ದೀರೆಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ತಂದೆ-ತಾಯಿ ಹಾಗೂ ನನ್ನ ಅಧಿಕಾರವಧಿಯಲ್ಲಿ ಆಶ್ರಯ ಮನೆ, ಶಾಲೆ, ದೇವಸ್ಥಾನ, ಮಸೀದಿ, ಸಮುದಾಯ ಭವನಗಳನ್ನು ಶಾಸಕರ ಹಾಗೂ ಸರಕಾರದ ಅನುದಾನದಲ್ಲಿ ಎಷ್ಟು ನಿರ್ಮಿಸಿದ್ದೇವೆ ಎಂಬುದನ್ನು ದಾಖಲೆ ಸಹಿತ ನೀಡಲು ನಾನು ಸಿದ್ಧ ನೀವು ಸಿದ್ಧರಿದ್ದೀರಾ ಎಂದು ಸವಾಲು ಹಾಕಿದರು.

ಇದನ್ನೂ ಓದಿ:ಇ-ಬಸ್‌: ನಿತ್ಯ 180 ಕಿ.ಮೀ.ಕ್ರಮಿಸುವ ಸವಾಲು

ಮೊದಲು ನಿಮ್ಮ ಫೌಂಡೇಶನ್‌ಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿಸಿ. ಇಲ್ಲದಿದ್ದರೆ ತನಿಖೆಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವೆ ಎಂದು ಎಚ್ಚರಿಸಿದರು.

Advertisement

ಬಾಬಾಸಾಹೇಬ ಅಂಬೇಡ್ಕರ್‌ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಶರಣಪ್ಪ ಅಮದಿಹಾಳ, ನಗರಸಭೆ ಸದಸ್ಯ ಸುರೇಶ ಜಂಗ್ಲಿ ಇದ್ದರು.

          
Advertisement

Udayavani is now on Telegram. Click here to join our channel and stay updated with the latest news.

Next