Advertisement
ಸೆ.29ಕ್ಕೆ ರೈಲು ಪ್ರಯಾಣ: ಈ ಪ್ಯಾಕೇಜ್ನಡಿ ಭಾರತೀಯ ಪ್ರಜೆಗಳಿಗೆ ಒಬ್ಬರು ಮತ್ತು ಇಬ್ಬರಿಗೆ 50 ಸಾವಿರ ರೂ., ಮೂವರಿಗೆ 75 ಸಾವಿರ ರೂ., ವಿದೇಶಿ ಪ್ರಜೆಗಳಿಗೆ 80 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಸೆ.29ರಂದು ರಾತ್ರಿ 8.30ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿರುವ ಸುವರ್ಣರಥ, ಮರು ದಿನ ಮುಂಜಾನೆ ಮೈಸೂರು ರೈಲು ನಿಲ್ದಾಣ ತಲುಪಲಿದೆ.
Related Articles
Advertisement
-ದರಿಯಾ ದೌಲತ್, ರಂಗನತಿಟ್ಟು ಪಕ್ಷಿಧಾಮ ವೀಕ್ಷಣೆ ನಂತರ ಮೈಸೂರಿಗೆ ಬಂದು ಹೋಟೆಲ್ ಲಲಿತ್ಮಹಲ್ ಪ್ಯಾಲೇಸ್ನಲ್ಲಿ ಮಧ್ಯಾಹ್ನದ ಭೂರಿ ಭೋಜನದೊಂದಿಗೆ ಸತ್ಕರಿಸಿ ನಂತರ ಜಾನಪದ ವಸ್ತು ಸಂಗ್ರಹಾಲಯ, ಜಯಲಕ್ಷ್ಮೀ ವಿಲಾಸ ಅರಮನೆ ವೀಕ್ಷಣೆ ನಂತರ ಮೈಸೂರು ಅರಮನೆಗೆ ಬಂದು ದಸರಾ ಗೋಲ್ಡ್ಪಾಸ್ ಮೂಲಕ ಜಂಬೂಸವಾರಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು.
ನಂತರ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು, ಅರಮನೆ ಮುಂಭಾಗದ ಮುಖ್ಯವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಯೊಂದಿಗೆ ಸಾಂಸ್ಕೃತಿಕ ನಗರಿಯ ಐಸಿರಿಯನ್ನು ಕಣ್ತುಂಬಿಕೊಂಡ ನಂತರ ಗಾಲಿಗಳ ಮೇಲಿನ ಅರಮನೆ ಸುವರ್ಣರಥಕ್ಕೆ ಕರೆದೊಯ್ದು ರಾತ್ರಿಯ ಭೋಜನದ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದು, ಮರುದಿನ ಬೆಳಗ್ಗೆ 7ಗಂಟೆಗೆ ಸುವರ್ಣರಥ ರೈಲು ಯಶವಂತಪುರ ರೈಲು ನಿಲ್ದಾಣ ತಲುಪುವುದರೊಂದಿಗೆ ದಸರಾ ಪ್ಯಾಕೇಜ್ ಪ್ರವಾಸ ಮುಕ್ತಾಯಗೊಳ್ಳಲಿದೆ. ಸುವರ್ಣರಥದಲ್ಲಿ ಪ್ರಯಾಣಿಸಿ ಮೈಸೂರು ದಸರೆಯ ವಿಶೇಷ ಅನುಭವ ಪಡೆಯಲಿಚ್ಚಿಸುವ ಪ್ರವಾಸಿಗರು ಆನ್ಲೈನ್ ಅಥವಾ ಕೆಎಸ್ಟಿಡಿಸಿ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಸೀಟು ಕಾದಿರಿಸಬಹುದು.
ಈ ಬಾರಿ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರು ದಸರಾ ಬಗ್ಗೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಗೋಲ್ಡನ್ ಚಾರಿಯೇಟ್ ಪ್ರವಾಸಿ ಪ್ಯಾಕೇಜ್ ದುಬಾರಿ ಇತ್ತು, ಈ ವರ್ಷ ಕಡಿಮೆ ಮಾಡಿದ್ದೇವೆ. ಜತೆಗೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದಲೂ ಮೈಸೂರಿಗೆ ಪ್ರವಾಸಿ ಪ್ಯಾಕೇಜ್ ಆಯೋಜಿಸಲಾಗುತ್ತಿದೆ.-ಪ್ರಿಯಾಂಕ್ ಖರ್ಗೆ, ಪ್ರವಾಸೋದ್ಯಮ ಸಚಿವ * ಗಿರೀಶ್ ಹುಣಸೂರು