Advertisement

ಸುಲ್ತಾನ್‌ ಪುರಿ ಮಾದರಿ ಘಟನೆ: ಅಪ್ರಾಪ್ತೆಗೆ ಢಿಕ್ಕಿ ಹೊಡೆದು ಸುಮಾರು ದೂರ ಎಳೆದೊಯ್ದ ಕಾರು ಚಾಲಕ

08:46 AM Jan 07, 2023 | Team Udayavani |

ಲಕ್ನೋ: ದೆಹಲಿಯ ಸುಲ್ತಾನ್‌ ಪುರಿಯಲ್ಲಿ ಕಾರಿನಡಿಯಲ್ಲಿ ಸಿಲುಕಿಕೊಂಡು ಯುವತಿಯೊಬ್ಬಳು ದಾರುಣ ಅಂತ್ಯವಾದ ಘಟನೆ ಪ್ರಚಲಿತದಲ್ಲಿರುವಾಗಲೇ ಅದೇ ಮಾದರಿಯ ಮತ್ತೊಂದು ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕೊತ್ವಾಲಿ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಅಪ್ರಾಪ್ತ ಬಾಲಕಿ ಸೈಕಲ್‌ ನಲ್ಲಿ ಹೋಗುತ್ತಿರುವಾಗ ಕಾರೊಂದು ಢಿಕ್ಕಿ ಹೊಡೆದು, ಬಾಲಕಿಯ ಕಾಲು ಕಾರಿನಡಿಗೆ ಸಿಲುಕಿಕೊಂಡು ಆಕೆಯನ್ನು ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಲಕ್ಷ್ಯವಾಗಿ ಕಾರು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ದೆಹಲಿಯ ಸುಲ್ತಾನ್ ಪುರಿಯಲ್ಲಿ ಅಂಜಲಿ ಎನ್ನುವ ಯುವತಿಯ ಸ್ಕೂಟಿಗೆ ಕಾರು ಢಿಕ್ಕಿಯಾಗಿ, ಕಾರಿನಲ್ಲಿದ್ದವರು ಆಕೆಯನ್ನು ಸುಮಾರು ದೂರದವರೆಗೂ ಎಳೆದುಕೊಂಡು ಹೋಗಿದ್ದರು. ಈ ಪ್ರಕರಣದ ಎಲ್ಲಾ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next