Advertisement

ಭಿನ್ನರಿಗೆ ಶಾಕ್‌:ರೇಣುಕಾಚಾರ್ಯ ಸಹಿತ ನಾಲ್ವರಿಗೆ ಹುದ್ದೆಯಿಂದ ಕೊಕ್!

12:11 PM Apr 30, 2017 | |

ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ ನಡುವಿನ ಭಿನ್ನಮತ ಶಮನಗೊಳಿಸಲು ಮುಂದಾಗಿರುವ ವರಿಷ್ಠರು ಕೆಲ ಕ್ರಮಗಳನ್ನ ಕೈಗೊಳ್ಳುತ್ತಿದ್ದು ಎರಡೂ ಬಣಗಳ ತಲಾ ಇಬ್ಬರನ್ನು ಹುದ್ದೆಯಿಂದ ವಜಾಗೊಳಿಸಿದೆ. 

Advertisement

ಈಶ್ವರಪ್ಪ ಬಣದ ಭಾನುಪ್ರಕಾಶ್, ನಿರ್ಮಲ್ ಕುಮಾರ್‌  ಸುರಾನಾ ಅವರುಗಳನ್ನು ಉಪಾಧ್ಯಕ್ಷ ಸ್ಥಾನದಿಂದ ಕೈ ಬಿಡಲಾಗಿದ್ದು, ಯಡಿಯೂರಪ್ಪ ಬಣದ ಎಂ.ಪಿ. ರೇಣುಕಾಚಾರ್ಯಗೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ಕೊಕ್‌ ನೀಡಲಾಗಿದ್ದು, ಗೋ ಮಧುಸೂಧನ್  ಅವರನ್ನು ರಾಜ್ಯ ವಕ್ತಾರ ಹುದ್ದೆಯಿಂದ ಕೆಳಗಿಳಿಸಿ ಎರಡೂ ಬಣಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. 

ಭಾನುಪ್ರಕಾಶ್, ನಿರ್ಮಲ್ ಕುಮಾರ್‌  ಸುರಾನಾಅವರನ್ನು ವಜಾ ಗೊಳಿಸಿದ್ದಕ್ಕೆ ಈಶ್ವರಪ್ಪ ಮತ್ತು ಸೊಗಡು ಶಿವಣ್ಣ ಅವರು ಬಹಿರಂಗವಾಗಿ  ಅಸಮಧಾನ ಹೊರ ಹಾಕಿದ್ದಾರೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next