Advertisement

ಕಾಫಿ ವಿಥ್‌ ರಾಜಹಂಸ

10:36 AM Jul 22, 2017 | |

ಇತ್ತೀಚೆಗಷ್ಟೇ “ರಾಜಹಂಸ’ ಚಿತ್ರದ ಆಡಿಯೋ ಬಿಡುಗಡೆಯಾಗಿತ್ತು. ಈಗ ಆ ಚಿತ್ರದ ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಸಿನಿಮಾದ ಹಾಡೊಂದರಲ್ಲಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಡಾ.ಚಂದ್ರಶೇಖರ ಕಂಬಾರ, ಮಾಸ್ಟರ್‌ ಹಿರಣ್ಣಯ್ಯ, ಆನಂದ್‌ ಗುರೂಜಿ ಕಾಣಿಸಿಕೊಂಡಿದ್ದಾರೆ.

Advertisement

ಹೌದು, ಜೋಶ್ವಾ ಶ್ರೀಧರ್‌ ಸಂಗೀತದಲ್ಲಿ ಮೂಡಿಬಂದ “ಜನಗಣಮನ ದೇಶ …’ ಎಂಬ ಲಿರಿಕಲ್‌ ವಿಡೀಯೋ ಹಾಡನ್ನು ಇತ್ತೀಚೆಗೆ ಗೀತರಚನೆಕಾರ ಜಯಂತ್‌ ಕಾಯ್ಕಿಣಿ ಅವರು ಬಿಡುಗಡೆ ಮಾಡಿದ್ದರು. ಧನಂಜಯ ದಿಡಗ ಬರೆದ ಗೀತೆಗೆ ರಘುದೀಕ್ಷಿತ್‌ ದನಿಯಾಗಿರುವ ಈ ಹಾಡಲ್ಲಿ ಇವರೆಲ್ಲರೂ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕನಿಗೆ ಯಾರೇ ವಿಶೇಷವಾಗಿ ಕಂಡರೂ, ಅವರೊಂದಿಗೆ ಕೆಲ ಹೊತ್ತು ಮಾತನಾಡಿ, ಕಾಫಿ ಕುಡಿದು ಸೆಲ್ಫಿ ತೆಗೆದುಕೊಳ್ಳುವ ಹವ್ಯಾಸ. ವಿಶೇಷ ವ್ಯಕ್ತಿಗಳ ಜತೆಗೆ ಕಾಫಿ ಕುಡಿಯುತ್ತ ಅವರ ಅನುಭವ ಹಂಚಿಕೊಳ್ಳುವ ಹವ್ಯಾಸವುಳ್ಳ ನಾಯಕ, ಅದರ ಸಲುವಾಗಿಯೇ, ಅವನು ಭಾರತದ ಅನೇಕ ರಾಜ್ಯವನ್ನು ಸುತ್ತುತ್ತಾನೆ. ಹಾಗಾಗಿಯೇ ಚಿತ್ರದ ಆ ಹಾಡನ್ನೂ ಸಹ ಉತ್ತರ ಭಾರತದ ಜೈಪುರ, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಹರಿದ್ವಾರ, ಹೃಷಿಕೇಶ, ಕಾಶಿ ಹೀಗೆ ಸುಮಾರು ಹತ್ತು ರಾಜ್ಯಗಳಲ್ಲಿ ಚಿತ್ರೀಕರಿಸಲಾಗಿದೆ. 

ಚಿತ್ರದಲ್ಲಿ ನಾಯಕನದು ವಿಶೇಷ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಅವರೊಂದಿಗೆ ಕಾಫಿ ಕುಡಿದು, ಸೆಲ್ಫಿ ತೆಗೆಸಿಕೊಂಡು ಅವರ ಅನುಭವ ಹಂಚಿಕೊಳ್ಳುವ ವ್ಯಕ್ತಿತ್ವ ಹೊಂದಿರುವುದರಿಂದಲೇ, ನಾಯಕ ಗೌರಿಶಿಖರ್‌, ಕೂಡ “ಕಾಫಿ ವಿತ್‌ ರಾಜ ಹಂಸ’ ಎನ್ನುವ ಕಾನ್ಸೆಪ್ಟ್ ಮೂಲಕ ಈಗಾಗಲೇ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಶ್ರೀಮುರಳಿ ಸೇರಿದಂತೆ ಅನೇಕರ ಜತೆ ಕಾಫಿ ಸವಿದು ಚಿತ್ರಕ್ಕೆ ಅವರ ಆಶೀರ್ವಾದ ಪಡೆದಿದ್ದಾರೆ.

ಇನ್ನೊಂದು ವಿಷಯವೆಂದರೆ, ಈ ಚಿತ್ರದಲ್ಲಿ ಆಟೋ ಡ್ರೈವರ್‌ಗಳು, ಪೌರಕಾರ್ಮಿಕರೂ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.  ಸದ್ಯಕ್ಕೆ ಟ್ರೇಲರ್‌ ಬಿಡುಗಡೆಗೆ ರೆಡಿಯಾಗಿರುವ ಚಿತ್ರತಂಡ, ಆಗಸ್ಟ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರವನ್ನು ಜಡೇಶ್‌ ಕುಮಾರ್‌ ನಿರ್ದೇಶಿಸಿದ್ದು, ರಂಜನಿ ರಾಘವನ್‌ ಇಲ್ಲಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಯಮುನಾ, ಬಿ.ಸಿ.ಪಾಟೀಲ್‌, ತಬಲಾನಾಣಿ, ರಾಜು ತಾಳಿಕೋಟೆ, ಬುಲೆಟ್‌ ಪ್ರಕಾಶ್‌, ವಿಜಯ್‌ ಚೆಂಡೂರ್‌ ಇತರರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next