Advertisement

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಪೂಜಾಗಾಂಧಿ ಖುಲಾಸೆ

07:05 AM Dec 24, 2017 | Team Udayavani |

ರಾಯಚೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂ ಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ನಟಿ ಪೂಜಾಗಾಂಧಿ ಅವರನ್ನು ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಖುಲಾಸೆಗೊಳಿಸಿದೆ.

Advertisement

ಶನಿವಾರ ವಿಚಾರಣೆ ಕೈಗೆತ್ತಿಕೊಂಡ 2ನೇ ಜೆಎಂಎಫ್‌ಸಿ ನ್ಯಾಯಾಧಿಧೀಶರಾದ ಪೂರ್ಣಿಮಾ ಯಾದವ, ಪೂಜಾ ಗಾಂಧಿ ಅವರನ್ನು ಪ್ರಕರಣದಿಂದ ಆರೋಪ ಮುಕ್ತರನ್ನಾಗಿಸಿ ತೀರ್ಪು ನೀಡಿದ್ದಾರೆಂದು ನಟಿ ಪರ ವಕೀಲರು ತಿಳಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾಗಾಂಧಿ , ನ್ಯಾಯಾಲಯ ಬಗ್ಗೆ ನನಗೆ ಗೌರವವಿದ್ದು, ತೀರ್ಪು ಸಂತೋಷ ತಂದಿದೆ ಎಂದರು. ಮುಂದೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪ ರ್ಧಿಸುವುದಿಲ್ಲ. ರಾಯಚೂರಿನ ಜತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದು, ಇಲ್ಲಿಗೆ ಬರುತ್ತಿರುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next