Advertisement

‘ಸಂಸ್ಕೃತಿ, ಸಂಪ್ರದಾಯದ ಪ್ರತಿಬಿಂಬ ಕರಾವಳಿ ಉತ್ಸವ’

12:04 PM Dec 30, 2017 | |

ಪಣಂಬೂರು: ಕರಾವಳಿ ಉತ್ಸವದ ಅಂಗವಾಗಿ ಪಣಂಬೂರು ಬೀಚ್‌ನಲ್ಲಿ ಡಿ.31ರ ವರೆಗೆ ನಡೆಯುವ ಬೀಚ್‌ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಬೀಚ್‌ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ರಾವ್‌ ಅವರು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು.

Advertisement

 ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಪ್ರತಿಬಿಂಬಿಸುವ ಕರಾವಳಿ ಉತ್ಸವದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಬೆಂಗಳೂರು, ಉತ್ತರ ಕರ್ನಾಟಕದ ಪ್ರವಾಸಿಗರಿಗೆ ಬೀಚ್‌ ಉತ್ಸವ ಸವಿಯಲು ಅಪೂರ್ವ ಅವಕಾಶ ಒದಗಿ ಬಂದಿದೆ. ಇಲ್ಲಿನ ಸಂಸ್ಕೃತಿ ಅರಿಯಲು, ವಿಶೇಷ ಆಹಾರ ಪದಾರ್ಥ ಸವಿಯಲು ಅವಕಾಶವಿದೆ ಎಂದರು.

ಸಮಿತಿಯ ಜಯಪ್ಪ, ಆರ್‌ಎಫ್‌ಒ ಶ್ರೀಧರ್‌, ಪಣಂಬೂರು ಠಾಣಾ ಕ್ರೈಂ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಉಮೇಶ್‌,
ಪಣಂಬೂರು ಬೀಚ್‌ ಅಭಿವೃದ್ಧಿ ಸಮಿತಿಯ ಯತೀಶ್‌ ಬೈಕಂಪಾಡಿ ಉಪಸ್ಥಿತರಿದ್ದರು. ಶುಕ್ರವಾರ ಕಡಲ ಕಿನಾರೆಯಲ್ಲಿ ಸಂಗೀತ ಸ್ಪರ್ಧೆಯ ಕೊನೆಯ ಸುತ್ತು, ನೃತ್ಯ ಸ್ಪರ್ಧೆ ಜರಗಿತು. ಬೀಚ್‌ ಉತ್ಸವದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮ ವೀಕ್ಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next