Advertisement

ಕಲ್ಲಿದ್ದಲು ಹಗರಣ ತನಿಖೆ ವಿಳಂಬವೇಕೆ?: ಸುಪ್ರೀಂ

08:30 AM Aug 22, 2017 | Karthik A |

ಹೊಸದಿಲ್ಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆಯನ್ನು ಪೂರ್ಣಗೊಳಿಸದ ಸಿಬಿಐ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಗರಣದ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಮೇಲಿಂದ ಮೇಲೆ ಎಚ್ಚರಿಸಿದ ಹೊರತಾಗಿಯೂ ನೀವು ಸುಮ್ಮನಿದ್ದೀರಿ. ಸದ್ಯ ತನಿಖೆ ಯಾವ ಹಂತದಲ್ಲಿದೆ ಎಂದು ಕೋರ್ಟ್‌ಗೆ ತಿಳಿಯಬೇಕಿದೆ. ಅದ್ದರಿಂದ ಪ್ರಕರಣದ ತನಿಖೆಯ ಪ್ರಗತಿ ಕುರಿತು ಸಿಬಿಐ ವರದಿ ಸಲ್ಲಿಸಬೇಕು ಎಂದು ನ್ಯಾ| ಮದನ್‌ ಬಿ ಲೋಕೂರ್‌ ನೇತೃತ್ವದ ತ್ರಿಸದ‌ಸ್ಯ ಪೀಠ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅ.9ಕ್ಕೆಮುಂದೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next