Advertisement

Congress ಸೋಲಿನ ಖಾತರಿಯಿಂದಲೇ ಸಿಎಂ ರಾಜಕೀಯ ನಿವೃತ್ತಿ ಮಾತು: ಜೋಶಿ

04:08 PM Apr 03, 2024 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್ ಗ್ಯಾಂಗ್ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇಲ್ಲಸಲ್ಲದ ಕೀಳು ಮಟ್ಟದ ಹೇಳಿಕೆಗಳನ್ನು ನೀಡಿ ಜನರಿಂದ ತಿರಸ್ಕೃತ ಗೊಂಡಿದ್ದು, ಇದೀಗ ಅದನ್ನೇ ಮುಂದುವರೆಸಿದ್ದು, ಜನ ಮತ್ತೆ ತಿರಸ್ಕಾರ ಶಿಕ್ಷೆ ನೀಡೋದು ಖಚಿತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭವಿಷ್ಯ ನುಡಿಡಿದಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಮೋದಿಯವರನ್ನು ನಿಂದಿಸಿದಷ್ಟು ಅವರ ಜನಪ್ರಿಯತೆ ಗಟ್ಟಿಗೊಳ್ಳುತ್ತದೆ ಎಂದರು. ಕಾಂಗ್ರೆಸ್ ಪಕ್ಷ ಸೋಲಲಿದೆ ಎಂಬ ಖಾತರಿಯಿಂದಲೇ ಸಿಎಂ ರಾಜಕೀಯ ನಿವೃತ್ತಿ ಮಾತನಾಡಿದ್ದಾರೆ.
ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಹೇಳಿದ್ದಾರೋ ಅದು ಸತ್ಯವಾಗಿದೆ. ಎನ್ ಡಿಆರ್ ಎಫ್ ಅಡಿಯಲ್ಲಿ ಶೇ.75ರಷ್ಟು ಹಣ ನೀಡಲಾಗಿದೆ. ಕಾಂಗ್ರೆಸ್ ಸದಾ ಸುಳ್ಳು‌ ಹೇಳುತ್ತ ಬಂದಿದ್ದು, ಬರ ಪರಿಹಾರ ವಿಚಾರದಲ್ಲಿ ಅದನ್ನೇ ಮುಂದುವರೆಸಿದೆ ಎಂದು ಆರೋಪಿಸಿದರು.

ಸುಮಲತಾ ಅವರು ಬಿಜೆಪಿ ಸೇರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಮಾಜಿ ಡಿಸಿಎಂ ಈಶ್ವರಪ್ಪ ಅವರು ದೆಹಲಿಗೆ ಹೋಗುವುದರಲ್ಲಿ ವಿಶೇಷವೇನು ಇಲ್ಲ. ಈಶ್ವರಪ್ಪ ಪ್ರಕರಣ ಸೇರಿದಂತೆ ಪಕ್ಷದಲ್ಲಿನ ಎಲ್ಲ ಅಸಮಾಧಾನ ಪ್ರಕರಣಗಳು ಸುಖಾಂತ್ಯ ಕಾಣಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next