Advertisement

ರಾಹುಲ್‌ ಗಾಂಧಿ ಹತ್ಯೆ ಆಗದಿದ್ರೆ..!;ಸಿಎಂ ಭಾಷಣದಲ್ಲಿ ಯಡವಟ್ಟು

02:30 PM Dec 14, 2017 | |

ಕೊಪ್ಪಳ : ‘ರಾಹುಲ್‌ ಗಾಂಧಿ ಅವರ ಹತ್ಯೆ ನಡೆಯುವ ಮುನ್ನ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿರುತ್ತಿದ್ದರೆ ನಾನು ಗೆಲ್ಲುತ್ತಿದ್ದೆ, ಸಿಎಂ ಆಗುತ್ತಿರಲಿಲ್ಲ…’ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆದ ಕಾಂಗ್ರೆಸ್‌ ಸಮಾವೇಶದ ಭಾಷಣದಲ್ಲಿ ಮಾಡಿದ ಯಡವಟ್ಟು.

Advertisement

ಭಾಷಣದ ವೇಳೆ ‘ರಾಜೀವ್‌ ಗಾಂಧಿ ಅವರ ಹತ್ಯೆ’ ಎನ್ನಬೇಕಾದರೆ ರಾಹುಲ್‌ ಗಾಂಧಿ ಎಂದರು. ಮಾಧ್ಯಮದವರು  ರಾಹುಲ್‌ ಅಲ್ಲ ರಾಜೀವ್‌ ಗಾಂಧಿ ಅಂದಾಗ ‘ಅದೇ  ನಾನು ರಾಜೀವ್‌ ಗಾಂಧಿ ಅಂದಿದ್ದು, ನೀವೆ ಮಧ್ಯ ಮಾತಾಡಿ ಯಡವಟ್ಟು ಮಾಡಿದ್ರಿ’ ಎಂದರು. 

ಸಮಾವೇಶದಲ್ಲಿ ಗಲಾಟೆ 

ಸಮಾವೇಶ ನಡೆಯುತ್ತಿದ್ದ ವೇಳೆ ಮೈದಾನದ ಹೊರಗೆ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ಕೆಲವರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಗಾಳಿಯಲ್ಲಿ ಕುರ್ಚಿಗಳನ್ನು ಎಸೆದು  ಬಡಿದಾಡಿಕೊಂಡ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next