Advertisement

ಜನ ಏಕೆ ಬಂದಿಲ್ಲಾ ರೀ..ಅರಣ್ಯಾಧಿಕಾರಿಗಳ ವಿರುದ್ಧ ಸಿಎಂ,ಸಚಿವ ರೈ ಕಿಡಿ

12:37 PM Jul 09, 2017 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ರಮನಾಥ ರೈ ಅವರು ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಘಟನೆ ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದಿದೆ. 

Advertisement

ವನಮಹೋತ್ಸವ -2017 ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮಾತ್ರ ಇದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ.ಇದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿಗಳು ಮತ್ತು ಸಚಿವ ರೈ ಕೆಂಡಾಮಂಡಲವಾಗಿದ್ದಾರೆ. 

ಜನರಿಗೆ ಇಂತಹ ಕಾರ್ಯಕ್ರಮದ ಕುರಿತು ಏಕೆ ಮಾಹಿತಿ ನೀಡಿಲ್ಲ. ಇದು ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ. ಜನರಿಗೆ ಅರಿವು ಮೂಡಿಸಬೇಕಲ್ವಾ ಎಂದು ತರಾಟೆಗೆ ತೆಗೆದುಕೊಂಡ ಬಗ್ಗೆ ವರದಿಯಾಗಿದೆ. 

ಮುಖ್ಯಮಂತ್ರಿಗಳು ಮತ್ತು ಸಚಿವರ ಪ್ರಶ್ನೆಗಳಿಗೆ ಮೌನವೇ ಅಧಿಕಾರಿಗಳ ಉತ್ತರವಾಗಿತ್ತು. 

ಮರಕ್ಕೇ ಕೊಡಲಿ !!!

Advertisement

ವನಮಹೋತ್ಸವ ಕಾರ್ಯಕ್ರಮಕ್ಕಾಗಿ ಮರವೊಂದನ್ನು ಕಡಿದು ಹಾಕಿದ ಘಟನೆ ಬೆಳಕಿಗೆ ಬಂದಿದೆ. 

ಶಾಂತಿ ಕಾಪಾಡಿ 

ಸಮಾರಂಭದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕೋಮು ಸಂಘರ್ಷ ಆಗಬಾರದು.ಯಾರೇ ಆಗಲಿ ಪ್ರಚೋದನ ಕಾರಿ ಆಗಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು. 

ಜಿಲ್ಲೆಯ ಎಲ್ಲರಿಗೂ ಮನವಿ ಮಾಡುವುದೆಂದರೆ ಶಾಂತಿ ಕಾಪಾಡಿ. ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ . ಕರಾವಳಿಯಲ್ಲಿ  ನೂರಾರು ವರ್ಷಗಳಿಂದ ಸರ್ವ ಧರ್ಮ ಸಮನ್ವಯಗಳಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ ಎಂದರು. 

ಇದೇ ವೇಳೆ ಕರಾವಳಿಯಲ್ಲಿ ಕ್ರೈಸ್ತ ಮೆಷಿನರಿಗಳಿಲ್ಲವೆ, ಅವರು ಬಂದು ಎಷ್ಟು ವರ್ಷವಾಯಿತು ಹೇಳಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next