Advertisement

Politics: ಅನ್ಸಾರಿ ನಿವಾಸಕ್ಕೆ ಸಿಎಂ ಭೇಟಿ; ಮುನಿಸು ಶಮನಕ್ಕೆ ಯತ್ನಿಸಿದ ಸಿದ್ದರಾಮಯ್ಯ

09:42 AM Mar 03, 2024 | Team Udayavani |

ಕೊಪ್ಪಳ:  ಕಾಂಗ್ರೆಸ್ ನಾಯಕ ಇಕ್ಬಾಲ್ ಅನ್ಸಾರಿ ಮುನಿಸು ಹಿನ್ನೆಲೆಯಲ್ಲಿ ಇಕ್ಬಾಲ್ ಅನ್ಸಾರಿ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಸಮಾಧಾನ ಮಾಡುವ ಪ್ರಯತ್ನ ನಡೆಸಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದಾರೆ. ಇಕ್ಬಾಲ್ ಅನ್ಸಾರಿ ಕುಟುಂಬದ ಜೊತೆ ಕೆಲ ಸಮಯವನ್ನು ಸಿಎಂ ಕಳೆದಿದ್ದಾರೆ.

ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಇಕ್ಬಾಲ್ ಅನ್ಸಾರಿ ಜೊತೆ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ. ಅನೇಕ ವಿಚಾರಗಳನ್ನು ಅನ್ಸಾರಿ ಸಿಎಂ ಬಳಿ ಹೇಳಿದ್ದಾರೆ. ಚರ್ಚೆ ನಡೆಸಿ ಅನ್ಸಾರಿ ಮುನಿಸು ಶಮನಗೊಳಿಸಲು ಸಿಎಂ ಪ್ರಯತ್ನ ನಡೆಸಿದ್ದಾರೆ.

ಇದೇ ವೇಳೆ ಇಕ್ಬಾಲ್ ಅನ್ಸಾರಿಯ ಮೊಮ್ಮಗಳು ಜೊತೆ ಕೆಲ ಕ್ಷಣವನ್ನು ಕಳೆದಿದ್ದಾರೆ. ಅನ್ಸಾರಿ ಮೊಮ್ಮಗಳು ಸಿಂಜಾ ಫಾತಿಮಾ ಜೊತೆ ಸಿಎಂ ಕೆಲ ಹೊತ್ತು ಕಳೆದು, “ಪುಟ್ಟ ಮಗುವಿನ ಜೊತೆ ಕಳೆದ ಕೆಲ ಕ್ಷಣ ದಿನದ ದಣಿವನ್ನು ಮರೆಸಿತು” ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬರೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತಯೇ ಅನ್ಸಾರಿ – ಸಿದ್ದರಾಮಯ್ಯ ಭೇಟಿ ಮಹತ್ವ ಪಡೆದುಕೊಂಡಿದೆ.

Advertisement

ಈ ಹಿಂದೆ ಗಂಗಾವತಿಯಲ್ಲಿ ಸ್ಪರ್ಧಿಸಿ ಸೋತಿದ್ದ ಅನ್ಸಾರಿ ಅವರು, ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next