Advertisement

CM ಸಿದ್ದರಾಮಯ್ಯ ಯಾವತ್ತಿಗೂ ನನ್ನ ನಾಯಕರು!: ರಮೇಶ ಜಾರಕಿಹೋಳಿ ಹೇಳಿಕೆ ಚರ್ಚೆಗೆ ಎಡೆ

09:12 PM Jan 21, 2024 | Team Udayavani |

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಯಾವತ್ತಿಗೂ ನನ್ನ ನಾಯಕರು ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೋಳಿ ಹೊಸ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟರು.

Advertisement

ಕಾಗವಾಡದಲ್ಲಿ ರವಿವಾರ ಮಾಜಿ ಸಚಿವ ಶ್ರೀಮಂತ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಜಾರಕಿಹೊಳಿ,ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

”ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ನನ್ನ ನಾಯಕರು. ಅವರು ಒಳ್ಳೆಯ ಸಿಎಂ, ಆದರೆ ಡಿಸಿಎಂ ಡಿ‌ ಕೆ‌ ಶಿವಕುಮಾರ ಅವರಿಂದ ಆಡಳಿತ ವ್ಯವಸ್ಥೆ ಬದಲಾವಣೆ ಆಗಿದೆ.ನಮ್ಮ ಸುದೈವ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಒಂದು ವೇಳೆ ಕೊತ್ವಾಲನ ಶಿಷ್ಯ ಡಿ.ಕೆ. ಶಿವಕುಮಾರ್ ಸಿಎಂ ಆಗಿದ್ದರೆ ವಿಷಕನ್ಯೆ ಮತ್ತು ಡಿಕೆಶಿ ಕೂಡಿ ಬೆಳಗಾವಿ ಜಿಲ್ಲೆ ಮಾರಾಟ ಮಾಡುತ್ತಿದ್ದರು.ನಮ್ಮ ಉತಾರಗಳು ಸಹಿತ ಡಿಕೆಶಿ ಹೆಸರಿಗೆ ಇರುತ್ತಿದ್ದವು ” ಎಂದು ನೇರ ವಾಗ್ದಾಳಿ ನಡೆಸಿದರು.

ಶಾಸಕ ರಾಜು ಕಾಗೆ ನೇರ ನುಡಿ ಹೊಂದಿದ್ದಾರೆ. ಆದರೆ, ಈಗ ಅವರಿಗೆ ಅಥಣಿ ಗಾಳಿ ಬೀಸಿದ್ದರಿಂದ ಅವರಲ್ಲಿ ಬದಲಾವಣೆ ಆಗಿದೆ. ಮತಕ್ಷೇತ್ರದಲ್ಲಿ ಜನರ ಮೇಲೆ ದಬ್ಬಾಳಿಕೆ ಆರಂಭವಾಗಿದೆ. ಈ ರೀತಿ ಅನ್ಯಾಯ ಮಾಡುವುದು ಅಷ್ಟು ಸರಿಯಲ್ಲ. ಅಧಿಕಾರಿಗಳು ಎಚ್ಚರಿಕೆಯಲ್ಲಿ ಇರಬೇಕು ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next