Advertisement

ಕೇಜ್ರಿವಾಲ್ ಸುಳ್ಳುಗಾರ ಹೌದು, ಆದರೆ ಕುರುಡರೇ ?: ಸಿಎಂ ಸಾವಂತ್ ಪ್ರಶ್ನೆ

04:04 PM Feb 05, 2022 | Team Udayavani |

ಪಣಜಿ: ಗೋವಾದಲ್ಲಿ ಚುನಾವಣಾ ಕಾವು ತೀವ್ರವಾಗಿದ್ದು, ಮುಖ್ಯಮಂತ್ರಿ ಪ್ರಮೋದ ಸಾವಂತ್ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಕೇಜ್ರಿವಾಲ್ ರವರು ಕಳೆದ 25 ವರ್ಷಗಳಲ್ಲಿ ಗೋವಾದಲ್ಲಿ ಒಂದೇ ಒಂದು ರಸ್ತೆ, ಆಸ್ಪತ್ರೆ, ಶಾಲೆಯನ್ನು ನಿರ್ಮಿಸಿಲ್ಲ ಎಂದಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೇಜ್ರಿವಾಲ್ ಯಾವುದೇ ಹಂತಕ್ಕೆ ಹೋಗಬಹುದು ಎಂಬುದು ಗೋವಾದ ಜನತೆಗೆ ತಿಳಿದಿದೆ. ಆದರೆ ಸುಳ್ಳು ಹೇಳುವುದು ಮತದಾರರಿಗೆ ಅಗೌರವ ತೋರಿಸಿದಂತಾಗುತ್ತದೆ. ಗೋವಾದಲ್ಲಿ ಅವರು ಎಲ್ಲಿ ಹೋದರೂ ಕೂಡ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕಾಣಬಹುದು ಎಂದು ತಿರುಗೇಟು ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೋವಾದ ಜನತೆಗೆ ಸುಳ್ಳು ಹೇಳುತ್ತಿರುವುದು ಬೇಸರದ ಸಂಗತಿ. ಬಿಜೆಪಿ ಆಡಳಿತಾವಧಿಯಲ್ಲಿ ಗೋವಾದಲ್ಲಿ ಯಾವುದೇ ರಸ್ತೆ, ಆಸ್ಪತ್ರೆ, ಶಾಲೆ ನಿರ್ಮಾಣವಾಗಿಲ್ಲ ಎಂದು ಅರವಿಂದ ಕೇಜ್ರಿವಾಲ್  ಸುಳ್ಳು ಹೇಳುವುದು ಸರಿಯಲ್ಲ ಎಂದರು.

ನೀವು ಒಬ್ಬ ಸುಳ್ಳುಗಾರ ಎಂದು ನಮಗೆ ತಿಳಿದಿದೆ, ಆದರೆ ನೀವು ಕುರುಡರಾಗಿದ್ದೀರಾ.? ಹೊಸ ವಿಮಾನ ನಿಲ್ದಾಣ, ಹೊಸ ರಸ್ತೆಗಳು, ಜುವಾರಿ ಬೃಹತ್ ಸೇತುವೆಯ ಕಾಮಗಾರಿ, ಮೇಲ್ಸೇತುವೆಗಳು, ಮಲ್ಟಿಸ್ಕೂಲ್ ಕುಜಿರಾ ಸಂಕೀರ್ಣ, ಹೊಸ ಜಿಎಂಸಿ ಸೂಪರ್ ಸ್ಪೆಶಾಲಿಟಿ ಬ್ಲಾಕ್, ಬಂಬೋಲಿ-ದೋನಾಪಾವುಲ್ ರಸ್ತೆ, ಇವೆಲ್ಲವನ್ನೂ ನೀವು ನೋಡಿಲ್ಲವೇ..? ಇವೆಲ್ಲವನ್ನು ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಿರ್ಮಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next