Advertisement

ಸಚಿವ ರಾಣೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಿಎಂ ಸಾವಂತ್

09:24 PM Jun 02, 2022 | Team Udayavani |

ಪಣಜಿ: ಕೆಲವು ರಾಜಕಾರಣಿಗಳಂತೆ ನನ್ನ ಕ್ಷೇತ್ರದ ಜನರಿಗೆ ಮಾತ್ರ ಕೆಲಸ ಕೊಡುವ ಅಭ್ಯಾಸ ನನಗಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ತಮ್ಮದೇ ಪಕ್ಷದ ಸಚಿವ ವಿಶ್ವಜಿತ್ ರಾಣೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ, ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 500 ಕ್ಕೂ ಹೆಚ್ಚು ಪೆಡ್ನೆ ಭಾಗದ ಜನರಿಗೆ ಉದ್ಯೋಗ ನೀಡಲಾಗಿದೆ. ಶೀಘ್ರದಲ್ಲಿಯೇ ಅವರಿಗೆ ಆಫರ್ ಲೆಟರ್ ನೀಡಲಾಗುವುದು. ಕೇವಲ ನನ್ನ ಮತ ಕ್ಷೇತ್ರದ ಜನರಿಗೆ ಮಾತ್ರ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ನೀಡಲಾಗಿದೆ ಎಂದು ಹೇಳುವುದು ತಪ್ಪು. ಕೆಲವು ರಾಜಕಾರಣಿಗಳಂತೆ ತನ್ನ ಕ್ಷೇತ್ರದ ಜನರಿಗೆ ಮಾತ್ರ ಕೆಲಸ ಕೊಡುವ ಅಭ್ಯಾಸ ನನಗಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಪರೋಕ್ಷವಾಗಿ ಸಚಿವ ವಿಶ್ವಜಿತ್ ರಾಣೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next