Advertisement

ಸಿಎಂ ಮಹಿಳೆಯನ್ನು ಅವಮಾನಿಸಿಲ್ಲ,ಎಲ್ಲರನ್ನೂ ತಾಯಿ ಅಂತ ಮಾತಾಡಿಸ್ತಾರೆ

03:01 PM Nov 21, 2018 | |

ಉಡುಪಿ: ಹೋರಾಟ ನಿರತ ರೈತ ಮಹಿಳೆಯ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ಪ್ರತಿಕ್ರಿಯೆ ನೀಡಿದ್ದು,ಸಿಎಂ ಕೆಟ್ಟ ಅರ್ಥದಲ್ಲಿ ಹೇಳಿಕೆ ನೀಡಿಲ್ಲ ಎಂದಿದ್ದಾರೆ. 

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಿಳೆಯನ್ನು ಅವಮಾನಿಸಿಲ್ಲ, ಅವರು ಕೆಟ್ಟ ಅರ್ಥದಲ್ಲಿ ಹೇಳಿಲ್ಲ. ಅವರು ಎಲ್ಲಾ ಮಹಿಳೆಯರ ಬಗ್ಗೆ ಗೌರವ ಹೊಂದಿದ್ದಾರೆ, ಎಲ್ಲರನ್ನೂ ತಾಯಿ ಎಂದೇ ಕರೆಯುತ್ತಾರೆ’ ಎಂದರು. 

ಕಬ್ಬು ಬೆಳೆಗಾರರ ಸಭೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ಗೈರಾದ ಕುರಿತು ಪ್ರಶ್ನಿಸಿದಾಗ ‘ಅವರು ಏನು ಸಂದಿಗ್ಧತೆಯಲ್ಲಿ ಸಿಲುಕಿದ್ದರೇನೋ, ನಾವು ಆ ಬಗ್ಗೆ  ಮಾತುಕತೆ ನಡೆಸುತ್ತೇವೆ’ ಎಂದರು. 

ರೈತ ಮಹಿಳೆಯ ಟೀಕೆಯ ವಿರುದ್ಧ ಕಿಡಿ ಕಾರಿದ್ದ ಸಿಎಂ ಆ ಮಹಿಳೆ ನಾಲ್ಕು ವರ್ಷ ಎಲ್ಲಿ ಮಲಗಿದ್ದಳು ಎಂದು ಹೇಳಿಕೆ ನೀಡಿದ್ದರು.ಆ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next