Advertisement

50 ತಾಸು ಶಾಸಕರ ಅಹವಾಲು ಆಲಿಸಿದ CM

11:26 PM Aug 17, 2023 | Team Udayavani |

ಬೆಂಗಳೂರು: ಶಾಸಕರ ಅಸಮಾಧಾನ ನಿವಾರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ದಿನಗಳಿಂದ ನಡೆಸುತ್ತಿದ್ದ ಮ್ಯಾರಥಾನ್‌ ಸಭೆ ಗುರುವಾರ ಮುಕ್ತಾಯಗೊಂಡಿದ್ದು, ಒಟ್ಟು 50 ಗಂಟೆಗಳ ಕಾಲ ಶಾಸಕರ ಸಮಸ್ಯೆಗೆ ಕಿವಿಯಾಗುವ ಮೂಲಕ ಸಮನ್ವಯ ಸಾಧಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

Advertisement

ಒಟ್ಟು 31 ಜಿಲ್ಲೆಗಳ 136 ಶಾಸಕರು ಮತ್ತು ಜಿಲ್ಲಾ ಮಂತ್ರಿಗಳ ಅಭಿಪ್ರಾಯವನ್ನು ಸಿದ್ದರಾಮಯ್ಯ ಸಂಗ್ರಹಿಸಿದ್ದು, ವಿಧಾನ ಪರಿಷತ್‌ ಸದಸ್ಯರು, ಸಂಸದರೂ ಸಭೆಯಲ್ಲಿ ಭಾಗಿಯಾಗಿದ್ದರು. ಭವಿಷ್ಯದಲ್ಲಿ ಎದುರಾಗುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸುವಂತೆ ಈ ಸಂದರ್ಭದಲ್ಲಿ ಸಿಎಂ ಕರೆ ನೀಡಿದ್ದಾರೆ.

31 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಇಲಾಖಾವಾರು ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಮುಖ್ಯಮಂತ್ರಿಗಳ ಸಚಿವಾಲಯದ 10 ಮಂದಿ ಅಧಿಕಾರಿ ಮತ್ತು ಸಿಬಂದಿಯಿಂದ ಶಾಸಕರ ಅಹವಾಲು ಮತ್ತು ಬೇಡಿಕೆ ದಾಖಲಿಸಿಕೊಂಡು ಆದ್ಯತೆ ಮತ್ತು ಲಭ್ಯತೆ ಆಧಾರದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಅಹವಾಲುಗಳ ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next