Advertisement

ಕಠಿಣವಾಗ್ತಾರೆ ಸಿಎಂ ;ಅಸಡ್ಡೆ ತೋರುವ ಅಧಿಕಾರಿಗಳಿಗೆ ಬೀಸ್ತಾರೆ ಚಾಟಿ!

03:15 PM Sep 14, 2018 | |

ಬೆಂಗಳೂರು: ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಭಾವಿಸಿ ಕೆಲಸದಲ್ಲಿ ಅಸಡ್ಡೆ ತೋರುತ್ತಿರುವ ಅಧಿಕಾರಿಗಳ ವಿರುದ್ಧ  ಸೋಮವಾರದಿಂದ ಇನ್ನಷ್ಟು ಕಠಿಣವಾಗಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆಯ ಸಂದೇಶ ರಾವಾನಿಸಿದ್ದಾರೆ. 

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಚೌತಿಯೊಳಗೆ ಸರ್ಕಾರ ಪತನವಾಗುತ್ತದೆ ಎಂಬ ಡೆಡ್‌ಲೈನ್‌ ಹೊರತಾಗಿಯೂ ನಾನೇನು ಸುಮ್ಮನೆ ಕುಳಿತುಕೊಂಡಿಲ್ಲ,ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಚಿವರೊಂದಿಗೆ ನಿರಂತರ ಸಂಪರ್ಕ ಹೊಂದಿ  ನನ್ನ ಕೆಲಸವನ್ನು ಮಾಡುತ್ತಿದ್ದೇನೆ’ಎಂದರು. 

ಕರ್ತವ್ಯ ನಿರ್ವಹಿಸಲು ಅಸಡ್ಡೆ ತೋರುವ ಅಧಿಕಾರಿಗಳ ಮೇಲೆ ಚಾಟಿ ಬೀಸುವುದಾಗಿ ಹೇಳಿದ ಸಿಎಂ ಸೋಮವಾರದಿಂದ ಎಲ್ಲಾ ಇಲಾಖೆಗಳ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next