Advertisement

ಸಿಎಂ, ರಾಜ್ಯಪಾಲರ‌ ಆರೋಗ್ಯ ಮಾಹಿತಿ ಸಂಗ್ರಹ

03:55 AM May 17, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಆರೋಗ್ಯ ಸಮೀಕ್ಷೆಯ ಭಾಗವಾಗಿ ರಾಜ್ಯಪಾಲ ವಿ.ಆರ್‌.ವಾಲ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಮಾಹಿತಿಯನ್ನು ಶನಿವಾರ ಸಂಗ್ರಹಿಸಿದ್ದೇವೆ ಎಂದು ಬಿಬಿಎಂಪಿ  ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ರಾಜ್ಯಸರ್ಕಾರದ ನಿರ್ದೇಶನದ ಮೇಲೆ ಮೇ.7 ರಿಂದ ಮನೆ-ಮನೆ ಆರೋಗ್ಯ ಸಮೀಕ್ಷೆ ಮಾಡುತ್ತಿದ್ದೇವೆ.

Advertisement

ಇದರಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತದೊತ್ತಡ ಹಾಗೂ ಕಿಡ್ನಿ ಸಮಸ್ಯೆ ಸೇರಿದಂತೆ ಯಾವುದಾದರು ಕಾಯಿಲೆ ಇದೆಯೇ ಎಂಬ ಮಾಹಿತಿ ಕಲೆಹಾಕುತ್ತಿದ್ದೇವೆ. ಇದಕ್ಕಾಗಿ 3 ಸಾವಿರ ತಂಡಗಳನ್ನು ರಚನೆ ಮಾಡಿಕೊಳ್ಳಲಾಗಿದ್ದು, ನಗರದ 36 ಲಕ್ಷ ವಸತಿ ನಿಯಲಗಳ ಪೈಕಿ 13 ಲಕ್ಷ ವಸತಿ ನಿಲಯಗಳಲ್ಲಿ ಇರುವವರಿಂದ ಈಗಾಗಲೇ ಆರೋಗ್ಯ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು.

ಆರೋಗ್ಯ ಸಮೀಕ್ಷೆಯ ಭಾಗವಾಗಿ  ರಾಜ್ಯಪಾಲ ವಿ.ಆರ್‌.ವಾಲ ಹಾಗೂ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರ ನಿವಾಸಗಳಿಗೆ ತೆರಳಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಇದಕ್ಕಾಗಿ “ಹೆಲ್ತ್‌ ವಾಚ್‌’ ಮೊಬೈಲ್‌ ಆ್ಯಪ್‌ ಬಳಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next