Advertisement

“ಸಿಎಂ ದೇವರ ಪೂಜೆ ಮಾಡಬಾರದಾ’

11:30 PM May 08, 2019 | Lakshmi GovindaRaj |

ಹಾಸನ: “ನೋಡ್ತಾ ಇರಿ, ಮೇ23ರ ನಂತರವೂ ಏನೂ ಆಗಲ್ಲ. ಯಾವ ರಾಜಕೀಯ ಬೆಳವಣಿಗೆಯೂ ಆಗಲ್ಲ. ಇಂತಹ ಬೆದರಿಕೆಗಳಿಗೆಲ್ಲಾ ನಾವು ಅಂಜುವುದೂ ಇಲ್ಲ’ ಎಂದು ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿಯವರು ಬಜೆಟ್‌ ಮಂಡಿಸುವುದೇ ಇಲ್ಲ. ಅಷ್ಟರಲ್ಲೇ ಸರ್ಕಾರ ಪತನವಾಗುತ್ತದೆ ಎಂದು ಈ ಹಿಂದೆ ಬಿಜೆಪಿ ಮುಖಂಡ ಆರ್‌.ಅಶೋಕ್‌ ಹೇಳಿದ್ದರು. ಸಿಎಂ ಬಜೆಟ್‌ ಮಂಡಿಸಲಿಲ್ಲವೇ? ಕಳೆದ ಒಂದು ವರ್ಷದಿಂದ ಬಿಜೆಪಿಯವರಿಗೆ ಅಧಿಕಾರದ್ದೇ ಚಿಂತೆ. ಆದರೆ, ಅವರ ಆಸೆ ಈಡೇರಲ್ಲ ಎಂದರು.

ಸಿಎಂ ಟೆಂಪಲ್‌ ರನ್‌ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯವರು ದೇವರ ಪೂಜೆ ಮಾಡಬಾರದಾ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಯವರು ಜನಪರವಾದ ಯಾವುದಾದರೂ ಕೆಲಸ ಮಾಡಲು ಹೋದರೆ ಚುನಾವಣಾ ನೀತಿ ಸಂಹಿತೆ ಉಲ್ಲಂ ಸುತ್ತಾರೆ ಎಂದು ಬಿಜೆಪಿಯವರು ದೂರುತ್ತಾರೆ. ಮತ್ತೂಂದೆಡೆ, ದೇವಾಲಯಗಳಿಗೆ ಹೋದರೂ ಟೀಕಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next