Advertisement

ಹಂಪಿ ಉತ್ಸವ ಆಚರಿಸಲು ಸಿಎಂ ನಿರ್ಣಯ: ಉಗ್ರಪ್ಪ

06:55 AM Dec 06, 2018 | Team Udayavani |

ಬಳ್ಳಾರಿ: ಹಂಪಿ ಉತ್ಸವ ಆಚರಿಸುವುದಾಗಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಿರ್ಣಯ ಕೈಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಲಾಗಿದೆ. ಇನ್ನು ಉತ್ಸವಕ್ಕೆ ಸಂಬಂಧಿಸಿದಂತೆ ಮುಂದಿನ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ ಎಂದು ಸಂಸದ ವಿ.ಎಸ್‌.ಉಗ್ರಪ್ಪ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಲಾವಿದರ, ಸಾಹಿತಿಗಳ ಭಾವನೆಗಳಿಗೆ ಪೂರ್ಣ ಸಹಮತವಿದೆ. ಆದರೆ, ಜಿಲ್ಲೆಯಲ್ಲಿನ ಸಾಧಕ-ಬಾಧಕ, ಬರ ಪರಿಸ್ಥಿತಿ  ಗಮನದಲ್ಲಿಟ್ಟುಕೊಂಡು ಹಂಪಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಇದರಲ್ಲಿ ಯಾರೂ ರಾಜಕೀಯ ಮಾಡದೆ ಆಚರಣೆಗೆ ಸಹಕರಿಸಬೇಕೆಂದು ಕೋರಿದರು.

ಹಂಪಿಗೆ ಪ್ರತಿವರ್ಷ 10 ರಿಂದ 12 ಲಕ್ಷ ಪ್ರವಾಸಿಗಳು ಭೇಟಿ ನೀಡುತ್ತಾರೆ. ಇವರಿಗೆ ನಿಗದಿಪಡಿಸಿದ್ದ 20, 200, 300 ರೂ, ಪ್ರವೇಶ ಶುಲ್ಕದಿಂದ ವರ್ಷಕ್ಕೆ ಸುಮಾರು 5 ಕೋಟಿ ರೂ.ಸಂಗ್ರಹವಾಗಲಿದೆ ಎಂದು ಅಧಿಕಾರಿಗಳೇ ಹೇಳುತ್ತಾರೆ. ಆದರೆ, ಅಲ್ಲಿನ ಅಭಿವೃದ್ಧಿ ಬಗ್ಗೆ ಕೇಳಿದರೆ ಅವರಿಂದ ಉತ್ತರವಿಲ್ಲ. ಕೇಂದ್ರ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಅಭಿವೃದ್ಧಿ ಆಗಬೇಕಿದೆ. ಇದೆಲ್ಲವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next