Advertisement

ಸರಕಾರದಿಂದಲೇ ಬೀಜ ಭದ್ರತೆ : ಕರಾವಳಿ‌‌‌ ಜಿಲ್ಲೆಗಳ ಅಭಿವೃದ್ಧಿಯತ್ತ ಸಿಎಂ ಚಿತ್ತ

05:21 PM Mar 16, 2022 | Team Udayavani |

ವಿಧಾನಸಭೆ : ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾದ ಕೆಲ ವಿಚಾಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಬುಧವಾರ ಪ್ರಕಟಿಸಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗಾಗಿ 100  ಸುಸಜ್ಜಿತ ಬೋಟ್ ಗಳಿಗೆ ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದಾರೆ.

Advertisement

ರಾಜ್ಯದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ನಂಬಿಕೊಂಡು ಸಾಕಷ್ಟು‌ ಜನರು ಬದುಕು ರೂಪಿಸಿಕೊಂಡಿದ್ದಾರೆ. ಆದರೆ ಆಳ ಸಮುದ್ರ ಮೀನುಗಾರಿಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅದಕ್ಕೆ ಅಗತ್ಯವಾದ ಬೋಟ್ ಸೌಲಭ್ಯ ಇಲ್ಲ. ಹೀಗಾಗಿ ಪ್ರಾಯೋಗಿಕವಾಗಿ ೧೦೦ ಜನರಿಗೆ ಇಂಥ ಸುಸಜ್ಜಿತ ಬೋಟ್ ನೀಡಲು ಸರಕಾರ ನಿರ್ಧರಿಸಿದೆ ಎಂದು ಹೇಳಿದರು.

ಈ ಪೈಕಿ ಶೇ.40 ರಷ್ಟು ಸಬ್ಸಿಡಿ , ಶೇ. 20 ರಷ್ಟು ರಾಜ್ಯ ಸರಕಾರದ ಕೊಡುಗೆ ಇರುತ್ತದೆ. ಇನ್ನುಳಿದ  ಹಣವನ್ನು ಫಲಾನುಭವಿಗಳು ಬ್ಯಾಂಕ್ ಸಾಲ ಹಾಗೂ ಸ್ವಂತ ಖಾತೆಯಿಂದ ಭರಿಸಿಕೊಳ್ಳಬೇಕು ಎಂದು ಹೇಳಿದರು.

ಅದೇ ರೀತಿ ಸಾಗರ ಮಾಲಾ ಯೋಜನೆ ಅನ್ವಯ ೧೮೮೦ ಕೋಟಿ ರೂ.ವೆಚ್ಚದಲ್ಲಿ ಬಂದರು ಅಭಿವೃದ್ಧಿಪಡಿಸಲಾಗುವುದು. ಕಾರವಾರಾದ ಬೇಲೆಕೇರಿ ಹಾಗೂ ಮಾಜಾಳ ಬಂದರನ್ನು ಸರ್ವ ಋತು ಬಂದರಾಗಿ ಮೇಲ್ದರ್ಜೆಗೆ ಏರಿಸಲಾಗುವುದು.‌ಕಾರವಾರ ಹಾಗೂ ಮಂಗಳೂರು ಬಂದರು ಸುಧಾರಣೆ ನಡೆಸಲಾಗುವುದು ಎಂದು ವಿವರಿಸಿದರು.

ಸರಕಾರದಿಂದಲೇ ಬೀಜ ಭದ್ರತೆ

Advertisement

ರೈತ ಸಮುದಾಯ ಸಂತಸಪಡುವ ವಿಚಾರವೊಂದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಕಟಿಸಿದ್ದಾರೆ. ಭವಿಷ್ಯದಲ್ಲಿ ಸರಕಾರದ ವತಿಯಿಂದಲೇ ಬೀಜ ಭದ್ರತೆ ನೀತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ.

ಮಾಜಿ ಸಚಿವ ರಮೇಶ್ ಕುಮಾರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ರೈತರ ಸಂಕಷ್ಟದ ಬಗ್ಗೆ ಸರಕಾರಕ್ಕೆ ಸಂಪೂರ್ಣ ಅರಿವಿದೆ. ಫೌಂಡೇಶನ್ ಸೀಡ್ ಹಾಗೂ ಮದರ್ ಸೀಡ್ ವಿಚಾರದಲ್ಲಿ ನೀವು ಪ್ರಸ್ತಾಪಿಸಿದ ಸಂಗತಿ ಸತ್ಯವಾಗಿದೆ. ಖಾಸಗಿ ಹಾಗೂ ಸರಕಾರಿ ಹಂತದಲ್ಲಿ ಬೀಜ ಸುಧಾರಣೆಗೆ ಸಂಬಂಧಪಟ್ಟಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ. ಆದಾಗಿಯೂ ನಕಲಿ ಬೀಜಗಳಿಂದ ರೈತರು ಹಾನಿಗೆ ಒಳಗಾಗಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದೆ ಇದೆ ಎಂದು ಹೇಳಿದರು.

ರೈತರಿಗೆ ಉತ್ತಮ‌ ಗುಣಮಟ್ಟದ ಬೀಜ ದೊರೆತಾಗ ಮಾತ್ರ ಉತ್ಕ್ಋಷ್ಟ  ಬೆಳೆ ಬೆಳೆಯುವುದಕ್ಕೆ ಸಾಧ್ಯ. ಈ ಹಿನ್ನಲೆಯಲ್ಲಿ ಸರಕಾರದಿಂದಲೇ ಬೀಜಭದ್ರತೆ ಒದಗಿಸುವ ಬಗ್ಗೆ ನಿರ್ಧರಿಸಲಾಗಿದೆ. ಸದ್ಯದಲ್ಲೇ ಇದರ ರೂಪಿರೇಷೆಗಳನ್ನು ಸಿದ್ದಗೊಳಿಸುತ್ತೇವೆ.‌ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಚಿಂತನೆ ಆರಂಭವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next