Advertisement

‘ಹೈ ಕಮಾಂಡ್‍ನಿಂದ ಇನ್ನೂ ಸಂದೇಶ ಬಂದಿಲ್ಲ’ : ಸಿಎಂ ಯಡಿಯೂರಪ್ಪ

05:32 PM Jul 25, 2021 | Team Udayavani |

ಬೆಂಗಳೂರು : ಇಂದು ಸಂಜೆಯೊಳಗೆ ಸಿಎಂ ಬದಲಾವಣೆ ಕುರಿತು ಬಿಜೆಪಿ ಹೈಕಮಾಂಡ್ ಏನು ಸಂದೇಶ ನೀಡುತ್ತೆದೆಯೋ ಎನ್ನುವ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಸಿಎಂ ಯಡಿಯೂರಪ್ಪ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

Advertisement

ಬೆಳಗಾವಿ ನೆರೆ ವೀಕ್ಷಣೆ ಬಳಿಕ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ‘ಹೈಕಮಾಂಡ್ ನಿಂದ ಇನ್ನೂ ಸಂದೇಶ ಬಂದಿಲ್ಲ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಬರಬಹುದು. ಏನ್ ಸಂದೇಶ ಬರುತ್ತದೆಯೋ ಎಂಬುದನ್ನು ನಾಳೆಯವರೆಗೆ ಕಾದು ನೋಡೋಣ. ಅಲ್ಲಿಯವರೆಗೆ ನನ್ನ ಕೆಲಸ ನಾ ಮಾಡುತ್ತೇನೆ’ಎಂದರು.

ಸಿಎಂ ಆಗಿ ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ರಾಜೀನಾಮೆ ಕೊಡಿ ಅಂದ್ರೆ ಕೊಡ್ತೀನಿ. ಇನ್ನೂ 10-15 ವರ್ಷ ಪಕ್ಷಕ್ಕಾಗಿ ದುಡಿಯುತ್ತೇನೆ. ಕೋನೇ ಕ್ಷಣದವರೆಗೆ ಕೆಲಸ ಮಾಡುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next