Advertisement

ನಮ್ಮ ನೀರಿಗೆ ಹುನ್ನಾರ ಮಾಡುತ್ತಿದ್ದಾರೆ: ಸ್ಟಾಲಿನ್ ಪತ್ರಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು

11:22 AM Jun 14, 2022 | Team Udayavani |

ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಪಿಎಂ ಮೋದಿಗೆ ಪತ್ರ ಬರೆದ ವಿಚಾರ ಇಂದು ಗೊತ್ತಾಗಿದೆ. ಪತ್ರದ ಪ್ರತಿಯನ್ನು ತರೆಸಿಕೊಳ್ಳುತ್ತೇನೆ. ತಮಿಳುನಾಡಿನವರ ಬೇಡಿಕೆ ಕಾನೂನುಬಾಹಿರ. ಒಕ್ಕೂಟ ವ್ಯವಸ್ಥೆಗೆ ವಿರೋಧ. ನಮ್ಮ ನೀರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ಕಾವೇರಿ ರಿವರ್ ಮಾನಿಟರಿಂಗ್ ಬೋರ್ಡ್‌ನಲ್ಲಿ ಡಿಪಿಆರ್ ಅಪ್ರೂವ್ ಮಾಡಬೇಕೆಂದು ನಾವು ಹೇಳಿದ್ದೇವೆ. ಈಗಾಗಲೇ ಅನೇಕ ಸಭೆಗಳಾಗಿದೆ. ಇಷ್ಟರಲ್ಲೇ ಅಂತಿಮ ಸಭೆ ಕೂಡ ನಡೆಯಲಿದೆ. ಈ ಮಧ್ಯೆ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ ಎಂದರು.

ಇದನ್ನೂ ಓದಿ:ಬಿಜೆಪಿಯಿಂದ ಭಾರೀ ಟೀಕೆಗೆ ಒಳಗಾದ ಸಿದ್ದರಾಮಯ್ಯ ಟ್ವೀಟ್

ನಮ್ಮ ನೀರಿನ ಅಡಿಯಲ್ಲಿ, ನಮ್ಮ ರಾಜ್ಯದಲ್ಲಿ ನಾವು ಮೇಕೆದಾಟು ಯೋಜನೆ ಮಾಡುತ್ತಿದ್ದೇವೆ. ಅದಕ್ಕೆ ಈಗಾಗಲೇ ಅನೇಕ ಪಕ್ರಿಯೆಗಳು ನಡೆದಿದೆ.15 ಸಭೆ ನಡೆದಿದೆ. ಆಗ ತಮಿಳುನಾಡು ಸಭೆಯಲ್ಲಿ ಭಾಗಿಯಾಗಿಲ್ಲ. ಈಗ ರಾಜಕೀಯಕ್ಕಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆ. ಇದೆಲ್ಲ ರಾಜಕೀಯ ಸ್ಟಂಟ್. ಕಾನೂನು ಬಾಹಿರ ಪತ್ರವನ್ನು ಕೇಂದ್ರ ಪರಿಗಣಿಸಬಾರದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next