Advertisement

ಶೌರ್ಯ ಪ್ರಶಸ್ತಿ ಗೌರವ ಧನ ಹೆಚ್ಚಳ

12:44 AM Dec 17, 2021 | Team Udayavani |

ಬೆಳಗಾವಿ: ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರಕಾರ ಒಂದು ಬಾರಿ ನೀಡುವ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸಿದೆ. ಈ ಬಗ್ಗೆ ರಾಜ್ಯದ ಸೈನಿಕ ಕಲ್ಯಾಣ ಮತ್ತು ಪುನರ್‌ ವಸತಿ ಇಲಾಖೆ ಗುರುವಾರ ಆದೇಶ ನೀಡಿದೆ.

Advertisement

ಅದಕ್ಕೆ ಪೂರಕವಾಗಿ ಬೆಳಗಾವಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪರಮವೀರ ಚಕ್ರ, ಅಶೋಕ ಚಕ್ರ ಪ್ರಶಸ್ತಿ ವಿಜೇತರಿಗೆ ತಲಾ 1.50 ಕೋಟಿ ರೂ., ಮಹಾವೀರ ಚಕ್ರ, ಕೀರ್ತಿ ಚಕ್ರ ವಿಜೇತರಿಗೆ ತಲಾ 1 ಕೋಟಿ ರೂ.,  ವೀರಚಕ್ರ ಮತ್ತು ಶೌರ್ಯ ಚಕ್ರ ವಿಜೇತರಿಗೆ 50 ಲಕ್ಷ ರೂ. ಹಾಗೂ ವಿವಿಧ ಸೇನಾ ಮೆಡಲ್‌ಗ‌ಳಿಗೆ 15 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದರು.

1971ರಲ್ಲಿ ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ಜಯ ಸಾಧಿ ಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಗುರು ವಾರ ಆಯೋಜಿಸಲಾಗಿದ್ದ “ವಿಜಯ ದಿವಸ’ ಕಾರ್ಯಕ್ರಮದಲ್ಲಿ ಸಿಎಂ ಈ ಘೋಷಣೆ ಮಾಡಿದ್ದಾರೆ.

ಸರಕಾರ ಸೈನಿಕರು, ನಿವೃತ್ತ ಯೋಧರು ಮತ್ತು ಹುತಾತ್ಮರ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಬದ್ಧ ವಾಗಿದೆ ಎಂದರು. ಕರ್ನಾಟಕ – ಕೇರಳ ಉಪ ಕ್ಷೇತ್ರದ ಕಮಾಂಡಿಂಗ್‌ ಆಫೀಸರ್‌ ಮೇ| ಜ| ಜೆ.ವಿ. ಪ್ರಸಾದ್‌, ಡಿಜಿಪಿ ಪ್ರವೀಣ್‌ ಸೂದ್‌, ಸರಕಾರದ ಮುಖ್ಯ ಕಾರ್ಯ ದರ್ಶಿ ಪಿ. ರವಿಕುಮಾರ್‌, ಸಚಿವ ಆರಗ ಜ್ಞಾನೇಂದ್ರ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next