Advertisement

ಕಾಂಗ್ರೆಸ್‌ ನಡೆಸಿದ ಹಗರಣಗಳು ಹಂತ ಹಂತವಾಗಿ ಬಯಲಿಗೆ : ಬೊಮ್ಮಾಯಿ

01:11 AM Jul 08, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಹಗರಣಗಳನ್ನು ಹಂತ ಹಂತವಾಗಿ ಬಯಲಿಗೆ  ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಗಾಂಧಿ ಹೆಸರನ್ನು ಬಹಳ ದುರುಪಯೋಗಪಡಿಸಿಕೊಂಡಿದ್ದಾರೆ. ಈ ದೇಶ ಅಧೋಗತಿಗೆ ಹೋಗಿರುವುದು ಕಾಂಗ್ರೆಸ್‌ನವರಿಂದ. ಕಾಂಗ್ರೆಸ್‌ ಕಾಲದಲ್ಲೊಂದು ಪಿಎಸ್‌ಐ ನೇಮಕಾತಿ ಪ್ರಕರಣ ಆಗಿತ್ತು. ಅದರಲ್ಲಿ ಡಿಐಜಿಯೊಬ್ಬರು ಶಾಮೀಲಾಗಿದ್ದರು. ಎಫ್ಐಆರ್‌ನಲ್ಲಿ ಡಿಐಜಿ  ಹೆಸರು ಬಂದರೂ ಅವರನ್ನು ವಿಚಾರಣೆ ಮಾಡಿರಲಿಲ್ಲ.  ಈಗ ನಾನು ಬಂದ ಬಳಿಕ ಕಾನೂನು ಕ್ರಮ ಜರಗಿಸಿದ್ದೇನೆ ಎಂದರು.

ಇವರು ಜನರ ಬಳಿ ಕ್ಷಮೆಯಾಚಿಸಬೇಕು. ಅವತ್ತು ನಾವು ಇಂಥ ಕೆಲಸ ಮಾಡಲಿಲ್ಲ.  ಬಿಜೆಪಿ ಸರಕಾರ ಅತ್ಯಂತ ಉನ್ನತ ಅಧಿಕಾರಿಗಳನ್ನು ಬಂಧಿಸಿದೆ ಎಂದು ಅವರಿಗೆ  ತಾವು ಮಾಡಿದ ತಪ್ಪಿನ ಅರಿವಾಗಬೇಕು. ನಮ್ಮ ಸರಕಾರ ನ್ಯಾಯನಿಷ್ಠುರವಾಗಿ ಎಷ್ಟೇ ದೊಡ್ಡವರಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next