Advertisement

ಧೂಳಿನಿಂದ ಸಂಕಷ್ಟ;ಆಗಾಗ ರಸ್ತೆ ಅಗೆಯುತ್ತಿರುವ ಹಿಂದಿನ ರಹಸ್ಯವೇನು ಎಂದು ಪ್ರಶ್ನಿಸಿದ ಸಿ.ಎಂ.

01:19 PM Dec 28, 2023 | Team Udayavani |

ಪಣಜಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಗೆಯುವ ಕಾಮಗಾರಿಯಿಂದಾಗಿ ಸಂತಿನೆಜ್ ಪ್ರದೇಶದ ಉದ್ಯಮಿಗಳು ಮತ್ತು ನಿವಾಸಿಗಳು ಧೂಳಿನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಆಗಾಗ ರಸ್ತೆ ಅಗೆಯುತ್ತಿರುವ ಹಿಂದಿನ ರಹಸ್ಯವೇನು ಎಂದು ಗೋವಾದ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರೀಕರ್ ಪುತ್ರ ಉತ್ಪಲ್ ಪರಿಕ್ಕರ್ ಪ್ರಶ್ನಿಸಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಮಗಾರಿಗೆ ಲೆಕ್ಕವಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಅವರು, ಯೋಜನೆ ಇಲ್ಲದೆ  ಕಾಮಗಾರಿಗಳು ನಡೆಯುತ್ತಿವೆ ಎಂದು ಟೀಕಿಸಿದರು.

ಕಳೆದ ವರ್ಷದಿಂದ ಸಂತಿನೆಜ್ ಪ್ರದೇಶದಲ್ಲಿ ವಿವಿಧ ಉದ್ದೇಶಗಳಿಗಾಗಿ ರಸ್ತೆಗಳನ್ನು ಅಗೆಯಲಾಗುತ್ತಿದೆ. ಈಗ ಮತ್ತೆ ಅಗೆಯುತ್ತಿದ್ದಾರೆ. ಪದೇ ಪದೇ ಅಗೆಯುವುದರಿಂದ ಸಂಚಾರ ದಟ್ಟಣೆ ಉಂಟಾಗುವುದಲ್ಲದೆ ಈ ಭಾಗದ ವ್ಯಾಪಾರಸ್ಥರಿಗೂ ತೊಂದರೆಯಾಗುತ್ತಿದೆ ಎಂದರು.

ಕಳೆದ ವರ್ಷ ಸಂತಿನೆಜ್‍ನಲ್ಲಿ ಈ ರಸ್ತೆ ಅಗೆಯುವುದನ್ನು ಪುನರಾರಂಭಿಸಲಾಗಿದೆ. ತೆರಿಗೆದಾರರ ಹಣವನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಪಣಜಿಯಲ್ಲಿ ಈವರೆಗೆ ಎಷ್ಟು ಕಾಮಗಾರಿ ನಡೆದಿದೆ, ಎಷ್ಟು ಖರ್ಚಾಗಿದೆ ಎಂಬ ಲೆಕ್ಕವಿಲ್ಲ. ಈ ವಿಷಯಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಕಾಮಗಾರಿ ಆರಂಭಿಸುವ ದಿನಾಂಕ ಮತ್ತು ಪೂರ್ಣಗೊಳ್ಳುವ ಸಮಯದ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಉತ್ಪಲ್ ಹೇಳಿದರು.

ಈ ಕಾರ್ಯಗಳನ್ನು ಮಾಡಬೇಕು. ಇದನ್ನು ಸ್ಪಷ್ಟಪಡಿಸಬೇಕಾಗಿದೆ. ಕ್ರಿಸ್‍ಮಸ್ ನಂತರ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳನ್ನು ಭೇಟಿ ಮಾಡಿ ಒಟ್ಟಾರೆ ಕಾಮಗಾರಿ ಮತ್ತು ಯಾವಾಗ ಪೂರ್ಣಗೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ಪಡೆಯುವುದಾಗಿ ಉತ್ಪಲ್ ಪರಿಕ್ಕರ್  ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next